ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ನೆಪದಲ್ಲಿ ದೊಡ್ಡ ಹಗರಣವೊಂದು ನಡೆದಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಚಿಲುಮೆ ಅನ್ನೋ ಸಂಸ್ಥೆ ಸೇರಿ ಅಧಿಕಾರಿಗಳ ವಿರುದ್ಧ ತನಿಖೆಗೆ ಆಗ್ರಹಿಸಲಾಗಿದೆ. ಈಗ ಮತದಾರರ ಪಟ್ಟಿಯಿಂದ ಮುಸ್ಲಿ, ದಲಿತರ ಹೆಸರು ಡಿಲೀಟ್ ಆಗಿವೆ ಎಂದು ಹೇಳಲಾಗುತ್ತಿದೆ.
ಆರ್ ಆರ್ ನಗರದಲ್ಲಿ ಮುಸ್ಲಿಂರು, ದಲಿತ ಕಾಲೋನಿ ಹಾಗೂ ಸ್ಲಿಂ ನಿವಾಸಿಗಳ ಹೆಸರುಗಳು ಮತದಾರರ ಪಟ್ಟಿಯಿಂದ ಡಿಲೀಸ್ ಆಗಿವೆಯಂತೆ. ಇಲ್ಲಿ 33,009 ಹೆಸರಗಳು ಡಿಲೀಟ್ ಆಗಿವೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಹೆಬ್ಬಾಳದ ವಾರ್ಡ್ 33ರ ವ್ಯಾಪ್ತಿಯಲ್ಲಿರುವ ಹೆಸರುಗಳನ್ನು ಡಿಲೀಟ್ ಮಾಡಲಾಗಿದ್ದು, ಇದರಲ್ಲಿ ಅತಿ ಹೆಚ್ಚು ಮುಸ್ಲಿಂ ಮತದಾರರ ಹೆಸರು ಅಳಿಸಿಹೋಗಿವೆ. ಬೂತ್ ನಂಬರ್ 232ರಲ್ಲಿ 65 ಹೆಸರು ಮಾಯವಾಗಿವೆ. ಬಿಬಿಎಂಪಿಯ 243 ವಾರ್ಡ್ ಗಳ ಚುನಾವಣೆಗೆ ಬಿಜೆಪಿ ಅಡ್ಡದಾರಿ ಹಿಡಿದಿದೆ ಎಂದು ಕಾಂಗ್ರೆಸ್ ತೀವ್ರವಾಗಿ ವಾಗ್ದಾಳಿ ನಡೆಸಿದೆ.