ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕರೋನಾ ಸೋಂಕಿತರ ಪ್ರಮಾಣ ದಿನೆದಿನೆ ಏರಿಕೆ ಕಾಣ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ನೈಟ್ ಕರ್ಫ್ಯೂ ಜೊತೆಗೆ ವೀಕೆಂಡ್ ಕರ್ಫ್ಯೂ ಸಹ ಜಾರಿಗೆ ತಂದಿದೆ. ಇದು ವೀಕೆಂಡ್ ಕರ್ಫ್ಯೂ ಅಲ್ಲ, ಲಾಕ್ ಡೌನ್ ಎಂದು ಜನರು ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ.
ಸರ್ಕಾರದ ಮಾರ್ಗಸೂಚಿಗಳಿಂದ ಹೂ ಹಣ್ಣು ವ್ಯಾಪಾರಸ್ಥರು, ಸಣ್ಣಪುಟ್ಟ ಹೋಟೆಲ್ ಅಂಗಡಿಗಳು, ಬಟ್ಟೆ ಶಾಪ್ ಗಳು, ಗ್ಯಾರೇಜ್ ಸೇರಿದಂತೆ ಸಣ್ಣ ಹಾಗೂ ಅತೀ ಸಣ್ಣ ವ್ಯಾಪಾರ ಮಾಡುವ ಹಾಗೂ ದಿನಗೂಲಿ ನಂಬಿ ಜೀವನ ಮಾಡುವ ಜನಕ್ಕೆ ಇದರಿಂದ ಮತ್ತೆ ಸಂಕಷ್ಟ ಎದುರಾಗಿದೆ. ಜೀವನಕ್ಕಿಂತ ಜೀವ ದೊಡ್ಡದು ಅಲ್ವಾ ಎಂದು ಜನಪ್ರತಿನಿಧಿಗಳು ಕೇಳುವ ಮೂಲಕ, ಜನರ ಮೇಲೆ ಬಲವಂತದಿಂದ ಲಾಕ್ ಡೌನ್ ಹೇರಿಕೆ ಮಾಡಲಾಗ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.
ಲಾಕ್ ಡೌನ್ ಅಂತಿಮ ಆಯ್ಕೆ ಆಗಿರಬೇಕು ಎಂದು ಪ್ರಧಾನಿ ಹೇಳಿದ್ದಾರೆ. ಆದ್ರೆ, ರಾಜ್ಯ ಸರ್ಕಾರ ಕರ್ಫ್ಯೂ ಹೆಸರಿನಲ್ಲಿ ಲಾಕ್ ಡೌನ್ ಮಾಡಿ ಬಹುತೇಕ ಅಂಗಡಿ ಮುಂಗಟ್ಟುಗಳನ್ನ ಗುರುವಾರದಿಂದಲೇ ಮುಚ್ಚಿಸುವ ಕೆಲಸ ಮಾಡುತ್ತಿದೆ. ಇದಕ್ಕಾಗಿ ಸ್ಥಳೀಯ ಆಡಳಿತಾಧಿಕಾರಿಗಳು ಹಾಗೂ ಪೊಲೀಸರನ್ನ ಬಳಕೆ ಮಾಡಿಕೊಳ್ಳುತ್ತಿದೆ. ಸಾರಿಗೆ ವ್ಯವಸ್ಥೆ ಇದೆ. ಆದ್ರೆ, ಜನರು ಓಡಾಟ ಮಾಡುವಂತಿಲ್ಲ, ವ್ಯಾಪಾರ ಮಾಡುವಂತಿಲ್ಲ. ಹಾಗಾದ್ರೆ, ಸಾರಿಗೆ ಸಂಚಾರ ಇದ್ದು ಎಷ್ಟು ಉಪಯೋಗ. ಇದ್ರಿಂದಾಗಿ ಜನರು ಸರ್ಕಾರಕ್ಕೆ ಹಿಡಿ ಶಾಪ ಹಾಕ್ತಿದ್ದಾರೆ.