ಪಡಿಕ್ಕಲ್ ಮಲಯಾಳಿ ಎಂದ ತರೂರ್ ಗೆ ಗಣೇಶ ತಿರುಗೇಟು

256

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಗುರುವಾರದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ತಂಡದ ಓಪನರ್ ದೇವದತ್ ಪಡಿಕ್ಕಲ್ ಶತಕ ಸಿಡಿಸಿ ಗೆಲುವಿನ ರೂವಾರಿಯಾಗಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ ಕಾಂಗ್ರೆಸ್ ಸಂಸದ ಶಶಿ ತರೂರ್, ಈ ವರ್ಷದ ಐಪಿಎಲ್ ನಲ್ಲಿ ಮಲಯಾಳಿ ಹುಡ್ಗನ ಶತಕ ಭರ್ಜರಿಯಾಗಿತ್ತು. ಈ ಮೂಲಕ ಇನ್ನೊಬ್ಬ ಮಲಯಾಳಿ ಸಂಜು ಸ್ಯಾಮ್ಸನ್ ಜೊತೆಯಾದೆ ಎಂದು ಬರೆದಿದ್ರು.

ಇದಕ್ಕೆ ಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ತಿರುಗೇಟು ನೀಡಿದ್ದಾರೆ. ಅಲ್ದೇ, ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ, 2016ರಲ್ಲಿ ಕರುಣ್ ನಯ್ಯರ್ ತ್ರಿಶತಕ ಸಾಧನೆ ಮಾಡಿದಾಗ ಕೆಲವರು ತಮ್ಮವರೆಂದು ವಾದಿಸಿದ್ದರು. ಆದ್ರೆ, ಅವರಿಗೆ ಸ್ಥಾನ ಸಿಗದಿದ್ದಾಗ ಕೈ ಬಿಟ್ಟಿದ್ದರು. ಈಗ ದೇವದತ್ ಪಡಿಕ್ಕಲ್ ವಿಚಾರದಲ್ಲಿ ಅದೆ ಆಗಿದೆ. ಅವರು ಮಲಯಾಳಿ ಅನ್ನೋದು ಒಪ್ಪುತ್ತೇನೆ. ಆದ್ರೆ, ನಯ್ಯರ್ ಹಾಗೂ ಪಡಿಕ್ಕಲ್ ಕ್ರಿಕೆಟ್ ಸಾಧನೆ ಹಿಂದೆ ಕೇರಳದ ಕೊಡುಗೆ ಏನೂ ಇಲ್ಲ. ಅವರು ಕನ್ನಡದ ಹುಡುಗರು ಎಂದು ತಿರುಗೇಟು ಕೊಟ್ಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!