ಪ್ರಜಾಸ್ತ್ರ ಸುದ್ದಿ
ಬಸವನಬಾಗೇವಾಡಿ: ಸಾಲ ತೀರಿಸಲು ಆಗದೆ ರೈತ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಜಯಪುರ ಜಿಲ್ಲೆ ಬಸವನಬಾಗೇಬಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದ ರೈತ ಮಹಿಳೆ ಸೀತವ್ವ ಶೇಖಪ್ಪ ಕೋಲಾಕರ(48) ನೇಣಿಗೆ ಶರಣಾಗಿದ್ದಾರೆ.
ಬೆಳೆ ಕೈಕೊಟ್ಟಿರುವುದರ ಜೊತೆಗೆ ಕೋವಿಡ್ ಸಂದರ್ಭದಲ್ಲಿ ಆದ ಸಾಲ ಮಾಡಲಾಗಿದ್ದು, ಅದನ್ನ ತೀರಿಸಲು ಆಗದೇ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬಸವನಬಾಗೇಬಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.