ವಿಚಿತ್ರ ಶಬ್ಧಕ್ಕೆ ಬೆಚ್ಚಿಬಿದ್ದ ಗುಮ್ಮಟನಗರಿ ಜನತೆ

251

ಪ್ರಜಾಸ್ತ್ರ ಸುದ್ದಿ

ವಿಜಯಪುರ: ವಿಚಿತ್ರ ಶಬ್ಧಕ್ಕೆ ವಿಜಯಪುರ ಜಿಲ್ಲೆಯ ಹಲವು ಗ್ರಾಮಗಳ ಜನತೆ ಬೆಚ್ಚಿಬಿದ್ದಿದೆ. ಬುಧವಾರ ತಡರಾತ್ರಿ ಬಸವನಬಾಗೇವಾಡಿ ತಾಲೂಕಿನ ಹುಣಸ್ಯಾಳ, ಕರಭಂಟ ಪಿಬಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭೂಮಿಯಿಂದ ವಿಚಿತ್ರವಾದ ಶಬ್ಧ ಕೇಳಿಸಿದೆಯಂತೆ.

ಹೀಗೆ ಕೇಳಿದ ಶಬ್ಧದಿಂದ ಆತಂಕಕ್ಕೆ ಒಳಗಾದ ಜನರು ಭೂಕಂಪನ ಎಂದು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಅಲ್ದೇ, ಇಡೀ ರಾತ್ರಿ ರಸ್ತೆಯಲ್ಲಿಯೇ ಕಳೆದಿದ್ದಾರೆ. ಈ ಹಿಂದೆ ಮಸೂತಿ, ಸಂಗಾಪೂರ, ಮಲಘಾಣ, ಅಡವಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಇದೇ ರೀತಿ ಶಬ್ಧ ಕೇಳಿ ಬಂದಿತ್ತು.




Leave a Reply

Your email address will not be published. Required fields are marked *

error: Content is protected !!