ಪ್ರಜಾಸ್ತ್ರ ಸುದ್ದಿ
ಬಸವನಬಾಗೇವಾಡಿ: ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಕಾಲುವೆಯಲ್ಲಿ ಎತ್ತೊಂದು ಬಿದ್ದಿತ್ತು. ಇದನ್ನು ನೋಡಿದ ರೈತರು ಹಾಗೂ ಗ್ರಾಮಸ್ಥರು ರಕ್ಷಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ರಕ್ಷಣಾ ಕಾರ್ಯಾಚರಣೆಯಲ್ಲಿ ಗ್ರಾಮಸ್ಥರಾದ ಮಲ್ಹಾರಿ ಶಿಂಧೆ, ವಸೀಮ್ ಮಕಾನಂದಾರ, ಜಾಪರ್ ಮಕಾನಂದಾರ್, ಸಿದ್ದಪ್ಪ ಕೊಣಿನ, ಮುದಕು ಮಂಟ್ಯಾಳ ಭಾಗವಹಿಸಿದ್ರು.