ರಾಜ್ಯ ಮಟ್ಟದ ಕವಿಗೋಷ್ಠಿಗೆ ಆಹ್ವಾನ

659

ಬೀದರ: ರಾಜ್ಯ ಯುವ ಬರಹಗಾರರ ಒಕ್ಕೂಟ ಮತ್ತು ಯುವ ಜಾಗೃತಿ ದಳದ ವತಿಯಿಂದ 3ನೇ ರಾಜ್ಯ ಮಟ್ಟದ ಸಮಾವೇಶವನ್ನ ಕೋಲಾರದಲ್ಲಿ ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ರಾಜ್ಯ ಮಟ್ಟದ ಕವಿಗೊಷ್ಠಿ ಮತ್ತು ರಾಜ್ಯ ಮಟ್ಟದ ಕುದ್ಮುಲ್ ರಂಗರಾವ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಅಕ್ಟೋಬರ್ 27ರಂದು ನಡೆಯುವ ಸಮಾವೇಶಕ್ಕೆ ಯುವ ಕವಿಗಳಿಗೆ ಆಹ್ವಾನ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಕವಿಗಳು, ಕವಯತ್ರಿಯರು ಹೆಸರುಗಳನ್ನ ನೋಂದಣಿ ಮಾಡಿಸಬಹುದು. ಭಾಗವಹಿಸಿದ ಕವಿಗಳಿಗೆ ಗೌರವ ಸಮರ್ಪಣೆ. ಉತ್ತಮ ಕವಿತೆ ಮಂಡಿಸಿದ ಕವಿ, ಕವಯತ್ರಿಗೆ ಬಹುಮಾನ ವಿತರಿಸಲಾಗುತ್ತೆ. ಸಮಾವೇಶದಲ್ಲಿ ವಾಚಿಸಿದ ಕವನಗಳ ಒಂದು ಸಂಕಲನ ಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಒಕ್ಕೂಟದ ಸದಸ್ಯರಾದ ಸಂಗಮೇಶ ಎನ್ ಜವಾದಿ ಅವರನ್ನ ಸಂಪರ್ಕಿಸಬಹುದು. 9663809340.




Leave a Reply

Your email address will not be published. Required fields are marked *

error: Content is protected !!