ಪ್ರಜಾಸ್ತ್ರ ಸುದ್ದಿ
ನವದೆಹಲಿ: ದೇಶದಲ್ಲಿ ದ್ವೇಷ ರಾಜಕಾರಣ ನಡೆಯುತ್ತಿದೆ. ಹಿಂದುಳಿದವರು, ಸಣ್ಣ ಸಣ್ಣ ಸಮುದಾಯಗಳ ಜನರು, ಮುಸ್ಲಿಂರು ಸೇರಿದಂತೆ ಸಂವಿಧಾನದ ಮೇಲೂ ದಾಳಿ ನಡೆಯುತ್ತಿದೆ. ನಿಮ್ಮ ಮೌನವನ್ನು ಸರಿಯಲ್ಲ ಎಂದು ಪ್ರಧಾನಿ ಮೋದಿಗೆ 108 ಹಿರಿಯ ಮಾಜಿ ಅಧಿಕಾರಿಗಳು ಪತ್ರ ಬರೆದಿದ್ದಾರೆ.
ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮನೆನ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್, ದೆಹಲಿ ಮಾಜಿ ಲೆಫ್ಟಿನೆಂಟ್ ಗರ್ವನರ್ ನಜೀಬ್ ಜಂಗ್, ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ ಪಿಳ್ಳೈ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮುಖ್ಯ ಕಾರ್ಯದರ್ಶಿ ಟಿ.ಕೆ ಎ ನಾಯರ್ ಸೇರಿದಂತೆ 108 ಹಿರಿಯ ಮಾಜಿ ಅಧಿಕಾರಿಗಳು ಪತ್ರ ಬರೆದಿದ್ದಾರೆ.
ಗುಜರಾತ್, ಹರಿಯಾಣ್, ಕರ್ನಾಟಕ, ಆಸ್ಸಾಂ, ಉತ್ತರಪ್ರದೇಶ, ಉತ್ತಾರಖಂಡ, ದೆಹಲಿ ಸೇರಿ ಅನೇಕ ರಾಜ್ಯಗಳಲ್ಲಿ ಹಿಂಸಾಚಾರ, ಕೋಮು ಗಲಭೆ ನಡೆಯುತ್ತಿವೆ. ಅಧಿಕಾರಿಗಳು ಸಂವಿಧಾನವನ್ನು ಬಿಟ್ಟು ನಡೆದುಕೊಳ್ಳುತ್ತಿರುವುದು ನಮಗೆ ಕಳವಳ ಮೂಡಿಸಿದೆ. ಇಂತಹ ಸಂದರ್ಭದಲ್ಲಿ ನಿಮ್ಮ ಮೌನ ಸರಿಯಲ್ಲ ಎಂದಿದ್ದಾರೆ.