ಪ್ರಜಾಸ್ತ್ರ ಸುದ್ದಿ
ದೇವರಹಿಪ್ಪರಗಿ: ತಾಲೂಕಿನ ಆಲಗೂರ ಗ್ರಾಮದ ರಾಜುಗೌಡ ಕಲಕೇರಿ ಎಂಬುವರ ಎತ್ತುಗಳು ಸುಮಾರು 10ಗಂಟೆಗಳ ಅವಧಿಯಲ್ಲಿ ಬರೋಬ್ಬರಿ 19 ಎಕರೆ ಹೊಲ ಹರಗಿ ಸಾಧನೆ ಮಾಡಿವೆ.
ತೊಗರಿ ಬಿತ್ತನೆ ಮಾಡಿದ ಹೊಲದಲ್ಲಿ ಬೆಳೆಯ ಸಾಲಿನ ಮಧ್ಯದಲ್ಲಿ ಹರಗುವ ಮೂಲಕ ಅವರ ಎತ್ತುಗಳು ಸುತ್ತಮುತ್ತಲಿನ ಗ್ರಾಮದಲ್ಲಿ ಈ ಸಾಧನೆ ಮಾಡಿದಕ್ಕೆ ಪ್ರಶಂಸೆಗೆ ಪಾತ್ರವಾಗಿವೆ. ಹೀಗಾಗಿ ಎತ್ತುಗಳಿಗೆ ಹಾಗೂ ರಾಜುಗೌಡ ಕಲಕೇರಿ ಅವರಿಗೆ ಗ್ರಾಮಸ್ಥರು ಬಣ್ಣ ಎರಚಿ ಮೆರವಣಿಗೆ ಮಾಡಿ ದೇವರ ದರ್ಶನ ಮಾಡಲಾಯಿತು.
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರಾದ ಭಾಗಣ್ಣ ಕಂಚಲಕಾಯಿ, ಹನುಮಂತರಾಯ ಕಲಕೇರಿ, ಮುತ್ತಪ್ಪ ಜನ್ನಪ್ಪಗೋಳ, ಮಡೆಪ್ಪ ಜನ್ನಪ್ಪಗೋಳ, ನಬಿಸಾಬ್ ಆನಿಮಡು, ಚಾಂದಸಾಬ ಕಲಕುಟ್ರಿ, ಪ್ರಕಾಶ್ ಕಡ್ಲೇವಾಡ, ಹುಸೇನಸಾಬ ನದಾಫ್ ಸೇರಿದಂತೆ ಅನೇಕರಿದ್ದರು.