ಪ್ರಜಾಸ್ತ್ರ ಸುದ್ದಿ
ಮಧ್ಯಪ್ರದೇಶ: ಇನ್ನು ಶಾಲೆಗಳನ್ನ ಶುರು ಮಾಡಲು ಅನುಮತಿ ಸಹ ನೀಡಿಲ್ಲ. ಅದಾಗ್ಲೇ ವಿದ್ಯಾರ್ಥಿಗಳು, ಪೋಷಕರ ಮೇಲೆ ಶಾಲಾ ಆಡಳಿತ ಮಂಡಳಿ ಫೀಸ್ ಸಲುವಾಗಿ ಒತ್ತಡ ಹೇರಲಾಗ್ತಿದೆ. ಬಾಕಿ ಇರುವ ಶಾಲೆ ಫೀಸ್ ಕಟ್ಟಲು ಒತ್ತಡ ಹೇರಿದ ಪರಿಣಾಮ 10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಧ್ಯಪ್ರದೇಶದ ಮಹಾಲಕ್ಷ್ಮೀನಗರದಲ್ಲಿ ಈ ಒಂದು ಘಟನೆ ನಡೆದಿದೆ. 15 ವರ್ಷದ ಹರೇಂದ್ರ ಸಿಂಗ್ ಗುರ್ಜರ್ ಮನೆಯಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯಾಗಿದ್ದಾನೆ. ಬಾಕಿಯಿರುವ ಶುಲ್ಕ ಪಾವತಿಗಾಗಿ ಶಾಲೆಯವರು ಒತ್ತಡ ಹಾಕಿದ್ದಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ಆರೋಪಿಸಿದ್ದು, ಪ್ರಕರಣ ದಾಖಲಾಗಿದೆ.
ಈ ಬಗ್ಗೆ ತನಿಖೆ ನಡೆಸಿದ್ದು, ವಿದ್ಯಾರ್ಥಿ ಯಾವುದೇ ಡೆತ್ ನೋಟ್ ಬರೆದಿಲ್ಲವೆಂದು ಲುಸುಡಿಯಾ ಪೊಲೀಸ್ ಅಧಿಕಾರಿ ಧರ್ಮೇಂದ್ರ ಸರಗಿಯಾ ತಿಳಿಸಿದ್ದಾರೆ.