ಆಸ್ತಿ ವಿಚಾರಕ್ಕೆ ಹಾಸನದಲ್ಲಿ ನಾಲ್ವರ ಹತ್ಯೆ

318

ಪ್ರಜಾಸ್ತ್ರ ಅಪರಾಧ ಸುದ್ದಿ

ಹಾಸನ: ಆಸ್ತಿ ವಿಚಾರಕ್ಕಾಗಿ ನಾಲ್ವರ ಹತ್ಯೆಯಾಗಿದೆ. ಈ ಭೀಕರ ಘಟನೆ ನಡೆದಿರುವುದು ಹೊಳೆನರಸೀಪುರ ತಾಲೂಕಿನ ಮುರುಗೋಡನಹಳ್ಳಿಯಲ್ಲಿ. ಮೂವರನ್ನ ಜಮೀನಿನಲ್ಲಿ ಹತ್ಯೆ ಮಾಡಲಾಗಿದೆ. ಮತ್ತೊಬ್ಬರು ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಬಸವರಾಜ, ಮಲ್ಲೇಶ, ರವಿ ಹಾಗೂ ಪಾಪಣ್ಣ ಮೃತಪಟ್ಟವರೆಂದು ತಿಳಿದು ಬಂದಿದೆ. ಪಾಪಣ್ಣ ಹಾಗೂ ಮಲ್ಲೇಶ ಕುಟುಂಬದ ನಡುವೆ ಆಸ್ತಿಗಾಗಿ ಜಗಳ ನಡೆದಿದೆ. ಅದು ನಾಲ್ವರ ಸಾವಿನಲ್ಲಿ ಅಂತ್ಯವಾಗಿದೆ. ಹೊಳೆನರಸೀಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!