ಪ್ರಜಾಸ್ತ್ರ ಸಾಹಿತ್ಯ ಮತ್ತು ರಂಗಭೂಮಿ
ಕಲಬುರಗಿ: ಕಲಬುರ್ಗಿ ರಂಗಾಯಣದ ವತಿಯಿಂದ 2020-21ನೇ ಸಾಲಿನಲ್ಲಿ ಬೀದಿ ನಾಟಕದ ಹಸ್ತಪ್ರತಿಗಳನ್ನ ಆಹ್ವಾನಿಸಲಾಗಿದೆ. ವಿಶೇಷ ಘಟಕದ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆ ಅಧಿನಿಯಮದ ಕುರಿತು ಬೀದಿ ನಾಟಕ ರಚಿಸಬೇಕಿದೆ.
ಹೀಗಾಗಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಅಭ್ಯರ್ಥಿಗಳಿಂದ ಹಸ್ತಪ್ರತಿಗಳನ್ನ ಆಹ್ವಾನಿಸಲಾಗಿದೆ. ನಾಟಕದ ಆಯ್ಕೆ ರಂಗಾಯಣದ್ದಾಗಿರುತ್ತೆ. ಆಯ್ಕೆಯಾದ ನಾಟಕಕ್ಕೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆಡಳಿತಾಧಿಕಾರಿ, ರಂಗಾಯಣ ಡಾ.ಸಿದ್ದಯ್ಯ ಪುರಾಣಿಕ ಸಾಂಸ್ಕೃತಿಕ ಸಮುಚ್ಛಯ, ಸೇಡಂ-ಶಹಾಬಾದ್ ರಸ್ತೆ, ಕಲಬುರಗಿ-585105 ವಿಳಾಸಕ್ಕೆ ಜೂನ್ 20ರೊಳಗೆ ಕಳಿಸಬೇಕು. ಅಥವ rangayanakalaburagi@gamil.com ಗೂ ಕಳಿಸಬಹುದು.