ಕೆಲವರಿಂದ ಸಿಎಂ ಬದಲಾವಣೆ ಪ್ರಸ್ತಾಪ: ಈಶ್ವರಪ್ಪ

215

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಬುಧವಾರ ಬರ್ತಿದ್ದು, ಸಾಕಷ್ಟು ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ನಾಯಕತ್ವ ಬದಲಾವಣೆಯ ಜಟಾಪಟಿ ನಡುವೆ ಸಚಿವ ಕೆ.ಎಸ್ ಈಶ್ವರಪ್ಪ ಮಾತ್ನಾಡಿದ್ದು, ಕೆಲವರಿಂದ ಸಿಎಂ ಬದಲಾವಣೆಯ ಪ್ರಸ್ತಾಪ ಬಂದಿದೆ ಎಂದಿದ್ದಾರೆ.

ಕೆಲವರು ಸಿಎಂ ಬದಲಾವಣೆಯಾಗಬೇಕು ಎಂದಿದ್ದಾರೆ. ಇನ್ನು ಕೆಲವರು ಸಿಎಂ ಪರವಾಗಿ ಇದ್ದಾರೆ. ಮತ್ತೆ ಕೆಲವರು ದೆಹಲಿಗೆ ಹೋಗಿ ಬಂದಿದ್ದಾರೆ. ಹೀಗಾಗಿ ಒಂದಿಷ್ಟು ಗೊಂದಲಗಳಿವೆ ಎಂದಿದ್ದಾರೆ. ಇನ್ನು 17 ಜನ ಶಾಸಕರ ಹೇಳಿಕೆ ಬಗ್ಗೆ ಮಾತ್ನಾಡಿದ ಅವರು, 17 ಜನ ಶಾಸಕರು ಬಂದಿದ್ರಿಂದ ಗೊಂದಲ ಸೃಷ್ಟಿಯಾಗಿದೆ ಎಂದಿಲ್ಲ. ಬಿಜೆಪಿಗೆ ಬಹುಮತ ಇದ್ದಿದ್ರೆ ಯಾವುದೇ ಗೊಂದಲಗಳಿರುತ್ತಿರಲಿಲ್ಲ ಅಂತಾ ಹೇಳಿದ್ದೇನೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!