ಪ್ರಜಾಸ್ತ್ರ ಕ್ರೀಡಾ ಸುದ್ದಿ
ಪುಣೆ: ಏಕದಿನ ವಿಶ್ವಕಪ್ ಟೂರ್ನಿಯ 17ನೇ ಪಂದ್ಯ ಭಾರತ ಹಾಗೂ ಬಾಂಗ್ಲಾದೇಶ ನಡುವೆ ನಡೆಯುತ್ತಿದೆ. ಟಾಸ್ ಗೆದ್ದ ಬಾಂಗ್ಲಾ ನಾಯಕ ನಜ್ಮುಲ್ ಹುಸೇನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು.
9ನೇ ಓವರ್ ಬೌಲಿಂಗ್ ಮಾಡಲು ಬಂದ ಹಾರ್ದಿಕ್ ಪಾಂಡ್ಯೆ 3ನೇ ಬೌಲ್ ಎಸೆದರು, ಲಿಟನ್ ದಾಸ್ ಹೊಡೆದ ಬೌಲ್ ನ್ನು ಕಾಲಿನಿಂದ ಹಿಡಿಯಲು ಹೋದಾಗ ಎಡವಿಬಿದ್ದು ಗಾಯ ಮಾಡಿಕೊಂಡರು. ಹೀಗಾಗಿ ಪಂದ್ಯಕ್ಕೆ ಸ್ವಲ್ಪ ತಡೆ ಆಯಿತು. ಫಿಸಿಯೊ ಸಹಾಯದ ಬಳಿಕ ಬೌಲಿಂಗ್ ಮಾಡಲು ನೋಡಿದರು ಆಗದೆ ವಾಪಸ್ ಆದರು.
ಪಾಂಡ್ಯೆ ಮೈದಾನದಿಂದ ಹೊರ ನಡೆದ ಬಳಿಕ ವಿರಾಟ್ ಕೊಹ್ಲಿ ಉಳಿದ ಮೂರು ಬೌಲ್ ಮಾಡಿ 2 ರನ್ ನೀಡಿದರು. ಪಾಂಡ್ಯೆ ಎಸೆದ ಮೊದಲ 3 ಬೌಲ್ ಗಳಲ್ಲಿ 8 ರನ್ ಗಳು ಬಂದಿವೆ.