ಕೋವಿಡ್ 19: ‘ಆಪ್ತಮಿತ್ರ’ ಸಹಾಯವಾಣಿ ಶುರು

649

ಬೆಂಗಳೂರು: ಕರೋನಾ ಸೋಂಕಿನ ಲಕ್ಷಣಗಳನ್ನ ಹೊಂದಿದವರು ಆಪ್ತಮಿತ್ರ ಸಹಾಯವಾಣಿಗೆ ಕರೆ ಮಾಡಿ ಮಾರ್ಗದರ್ಶನ ಪಡೆಯಬಹುದು ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ‘ಆಪ್ತಮಿತ್ರ’ ಸಹಾಯವಾಣಿ 14410 ನಂಬರ್ ಗೆ ಚಾಲನೆ ನೀಡಿ ಮಾತ್ನಾಡಿದ್ರು.

ಈ ಸಹಾಯವಾಣಿ ನಂಬರ್ ಗೆ ಕರೆ ಮಾಡಿ ರಾಜ್ಯದ ಜನತೆ ಮಾರ್ಗದರ್ಶನ ಪಡೆದುಕೊಳ್ಳಬಹುದು. ರಾಜ್ಯದ ಎಲ್ಲರಿಗೂ ಹಾಗೂ ಬಹುಮುಖ್ಯವಾಗಿ ಹಾಟ್ ಸ್ಪಾಟ್ ಪ್ರದೇಶಗಳಲ್ಲಿರುವ ಜನರಿಗೆ ಇದನ್ನ ತಲುಪಿಸಿ, ರೋಗ ಲಕ್ಷಣ ಗುರುತಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದ್ರು.

ಈ ವೇಳೆ ಡಿಸಿಎಂ ಅಶ್ವಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!