ಮಂಡ್ಯ: ತಾಲೂಕಿನ ಮುತ್ತೇಗೆರೆ ಗ್ರಾಮ ಪಂಚಾಯಿತಿ ವಾರ್ಡುಗಳಿಗೆ ಜಿಲ್ಲಾಡಳಿತ, ಗ್ರಾಮೀಣ ಅಧಿಕಾರಿ, ರೆವಿನ್ಯೂ ಇನ್ಸ್ಪೆಕ್ಟರ್ ವತಿಯಿಂದ ಡೆಂಗ್ಯೂ ಹಾಗೂ ಮಲೇರಿಯಾ ತಡೆಗಟ್ಟುವಿಕೆ ಔಷಧಿ ಸಿಂಪಡಿಸಲಾಯ್ತು.
ಸಿದ್ದೇಗೌಡ ಕೊಪ್ಪಲು, ನಂದಹಳ್ಳಿ, ಮುತ್ತೇಗೆರೆ, ಹಾರಕದಹಳ್ಳಿ, ನಂಜನಹಳ್ಳಿ, ಹೊನಗನಹಳ್ಳಿ, ಹಟಣ್ನ ಸೇರಿದಂತೆ 14 ಗ್ರಾಮಗಳಲ್ಲಿ ಔಷಧಿ ಸಿಂಪಡಿಸಲಾಯ್ತು. ಸಾರ್ವನಿಕರ ಕುಡಿಯುವ ನೀರಿನ ಸ್ಥಳಗಳು, ಜಾನುವಾರುಗಳಿಗೆ ನಿರ್ಮಾಣ ಮಾಡಿರುವ ನೀರಿನ ತೊಟ್ಟಿಗಳು, ಗಟಾರು ಸೇರಿದಂತೆ ಹಲವು ಕಡೆ ಔಷಧಿ ಸಿಂಪಡಿಸಲಾಯ್ತು.
ಈ ವೇಳೆ ಗ್ರಾಮೀಣ ಅಧಿಕಾರಿ ರಮೇಶಕುಮಾರ, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ, ಮುತ್ತೇಗೆರೆ ಗ್ರಾಮ ಪಂಚಾಯಿತಿ ಪಿಡಿಓ ಬಸವರಾಜ, ಮಾಜಿ ಅಧ್ಯಕ್ಷ, ಸದಸ್ಯೆ ರುಕ್ಮಿಣಿ, ಅಂಗನವಾಡಿ ಕಾರ್ಯಕರ್ತೆ ಅನಿತಾ ನಾಗರಾಜ, ಆಶಾ, ಮಮತಾ, ವಾಟರ್ ಸಪ್ಲೈ ಮರಿಯಯ್ಯ ಸೇರಿ ಹಲವರಿದ್ದರು.