ಪ್ರಜಾಸ್ತ್ರ ಸುದ್ದಿ
ರಾಮನಗರ: ಕರ್ತವ್ಯ ನಿರ್ವಹಿಸುತ್ತಿರುವ ಸಮಯದಲ್ಲಿಯೇ ಪೊಲೀಸರೇ ಮದ್ಯ ಸೇವನೆ ಮಾಡಿ ಗಲಾಟೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಮಾಗಡಿ ಠಾಣೆ ಎಎಸ್ಐ ಮಂಜುನಾಥ್, ಕುದೂರು ಕ್ರೈಂ ಪಿಸಿ ನಾರಾಯಣ ಸೇರಿದಂತೆ ನಾಲ್ವರು ಮೋಜುಮಸ್ತಿ ಮಾಡಿ ಗಲಾಟೆ ಮಾಡಿದ್ದಾರೆ.
ಕೈದಿಯೊಬ್ಬನನ್ನು ಮಾಗಡಿ ಠಾಣೆಯಿಂದ ರಾಮನಗರ ಕಾರಗೃಹಕ್ಕೆ ಬಿಡಲು ಬಂದಿದ್ದ ಪೊಲೀಸರು, ಆತನನ್ನು ಬಿಟ್ಟು ವಾಪಸ್ ಬರುವಾಗಿ ಮದ್ಯ ಸೇವನೆ ಮಾಡಿದ್ದಾರೆ. ಎಣ್ಣೆ ನಶೆಯಲ್ಲಿ ಸಮವಸ್ತ್ರ ಸಹ ಬಿಚ್ಚಿಟ್ಟು ಮೋಜು ಮಸ್ತಿ ಮಾಡಿದ್ದಾರೆ. ಅಲ್ಲದೆ ಕಾರು ಚಾಲಕನೊಂದಿಗೆ ಗಲಾಟೆ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.