ಪ್ರಜಾಸ್ತ್ರ ಸುದ್ದಿ
ಕೋಲಾರ: ಮುಂಬರುವ ವಿಧಾನಸಭಾ ಚುನಾವಣೆ ಸಂಬಂಧ ಜೆಡಿಎಸ್ ಪ್ರಚಾರಕ್ಕೆ ಇಳಿದಿದೆ. ಇಂದಿನಿಂದ ಪಂಚರತ್ನ ರಥಯಾತ್ರೆ ಶುರುವಾಗಲಿದೆ. ಜಿಲ್ಲೆಯ ಮುಳಬಾಗಿಲು ತಾಲೂಕಿನ ಹೊರವಲಯದಲ್ಲಿ ಸಮಾವೇಶ ಆಯೋಜಿಸಲಾಗಿದೆ.
ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿ ಹಲವು ನಾಯಕರು ಭಾಗವಹಿಸಲಿದ್ದಾರೆ. ನವೆಂಬರ್ 22ರ ತನಕ ಕೋಲಾರದಲ್ಲಿ ರಥಯಾತ್ರೆ ಸಾಗಲಿದೆ.
ಇವತ್ತಿನ ಕಾರ್ಯಕ್ರಮದಲ್ಲಿ 100 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಘೋಷಣೆ ಮಾಡುವ ಸಾಧ್ಯತೆಯಿದೆ. ಈ ಹಿಂದೆ ಕುಮಾರಸ್ವಾಮಿ ಈ ಬಗ್ಗೆ ಹೇಳಿದ್ದರು. ಹೀಗಾಗಿ ಯಾವ ಕ್ಷೇತ್ರದಿಂದ ಯಾರಿಗೆ ಟಿಕೆಟ್ ಅನ್ನೋ ಕುತೂಹಲ ಮೂಡಿದೆ. ಇಂದು ಮುಳಬಾಗಿಲು, 19 ಬಂಗಾರಪೇಟೆ, 20 ಮಾಲೂರು, 21 ಕೋಲಾರ, 22ರಂದು ಶ್ರೀನಿವಾಸಪುರದಲ್ಲಿ ಸಮಾವೇಶ ನಡೆಯಲಿದೆ.