ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ತಾನೊಬ್ಬ ಯುವ ವಿಜ್ಞಾನಿ, ವಿಶ್ವದ ಅನೇಕ ರಾಷ್ಟ್ರಗಳಿಗೆ ತೆರಳಿದ್ದೇನೆ. ನಾನು ತಯಾರಿಸಿರುವ ಡ್ರೋನ್ ನಿಂದ ಏನೆಲ್ಲ ಸಾಧನೆ ಮಾಡಿದ್ದೇನೆ ಎಂದು ದೊಡ್ಡ ಸುಳ್ಳಿನ ಕಥೆ ಕಟ್ಟಿ, ಜನರನ್ನು ಯಾಮಾರಿಸಿದ್ದ ಪ್ರತಾಪ್ ಅಲಿಯಾಸ್ ಡ್ರೋನ್ ಪ್ರತಾಪ್ ವಿರುದ್ಧ ಒಂದೊಂದೇ ದೂರು ದಾಖಲಾಗುತ್ತಿವೆ.
ಇದೀಗ ಜಿಲ್ಲಾ ಪಂಚಾಯ್ತಿಗೆ ಜೆಡಿಎಸ್ ಟಿಕೆಟ್ ಕೊಡಿಸುವುದಾಗಿ ಹೇಳಿ ಚಂದನ್ ಎಂಬುವರಿಗೆ ಮೋಸ ಮಾಡಿರುವ ಆರೋಪದ ಮೇಲೆ ಪೊಲೀಸ್ ಆಯುಕ್ತರಿಗೆ ಆತ ದೂರು ನೀಡಿದ್ದಾನೆ. ಟಿಕೆಟ್ ಕೊಡಿಸುವ ವಿಚಾರದಲ್ಲಿ ನನಗೆ ಹೆಚ್.ಡಿ ಕುಮಾರಸ್ವಾಮಿ ಗೊತ್ತು. ಅವರ ಫಾರ್ಮ್ ಹೌಸ್ ನಲ್ಲಿ ನಾವು ಆಗಾಗ ಭೇಟಿಯಾಗುತ್ತೇವೆ. ನಿಮಗೆ ಜೆಡಿಎಸ್ ಟಿಕೆಟ್ ಕೊಡಿಸುತ್ತೇನೆ ಎಂದು 2 ಲಕ್ಷ ರೂಪಾಯಿ ಪಡೆದಿದ್ದಾರೆ ಅಂತಾ ದೂರು ಸಲ್ಲಿಸಿದ್ದಾರೆ. ಇದರ ಆಧಾರದ ಮೇಲೆ ಜೆಡಿಎಸ್ ಸಹ ದೂರು ಸಲ್ಲಿಸಲು ಸಜ್ಜಾಗಿದೆ.
ಆತನೊಂದಿಗೆ ಮಾತನಾಡುವಾಗ ಹೆಚ್.ಡಿ ಕುಮಾರಸ್ವಾಮಿ, ಡಿ.ಕೆ ಶಿವಕುಮಾರ್, ಅನ್ನದಾನಿಯ ಹೆಸರು ಪ್ರಸ್ತಾಪ ಮಾಡಿರುವ ಆಡಿಯೋ ವೈರಲ್ ಆಗಿದೆ. ಇದರ ಆಧಾರದ ಮೇಲೆ ಜೆಡಿಎಸ್ ದೂರು ನೀಡಲು ಸಜ್ಜಾಗಿದೆ. ಹೀಗಾಗಿ ಪ್ರತಾಪ್ ವಿರುದ್ಧ ಒಂದೊಂದೇ ವಂಚನೆ, ಮೋಸದ ಪ್ರಕರಣಗಳು ದಾಖಲಾಗುತ್ತಿವೆ.