ಗೋಕಾಕಿನಲ್ಲಿ ಇಂದು ಬಿಗುವಿನ ವಾತಾವರಣ ಏಕೆ?

202

ಪ್ರಜಾಸ್ತ್ರ ಸುದ್ದಿ

ಬೆಳಗಾವಿ: ಜಿಲ್ಲೆಯ ಗೋಕಾಕಿನಲ್ಲಿ ಇಂದು 2ಎ ಮೀಸಲಾತಿಗಾಗಿ ಪಂಚಮಸಾಲಿ ಸಮಾಜದ ಸಮಾವೇಶ ನಡೆಯಲಿದೆ. ಇಲ್ಲಿಗೆ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಬರುತ್ತಿದ್ದಾರೆ. ಇದಕ್ಕೂ ಗೋಕಾಕಿನಲ್ಲಿ ಬಿಗುವಿನ ವಾತಾವರಣಕ್ಕೂ ಏನು ಸಂಬಂಧ ಎನ್ನಬಹುದು. ಅದಕ್ಕೂ ಕಾರಣವಿದೆ.

ಕಾಂಗ್ರೆಸ್ ಮಾಜಿ ಸಚಿವ, ಶಾಸಕ ಸತೀಶ್ ಜಾರಕಿಹೊಳಿಯವರು ಇತ್ತೀಚೆಗೆ ಹಿಂದೂ ಪದದ ಬಗ್ಗೆ ನೀಡಿದ್ದ ಹೇಳಿಕೆ ಸಂಬಂಧ ದೊಡ್ಡ ಮಟ್ಟದ ರಾಜಕೀಯ ನಡೆಯುತ್ತಿದೆ. ಇದೆ ವಿಚಾರವಾಗಿ ಶಾಸಕ ಯತ್ನಾಳ ಅವರು, ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಹೀಗಾಗಿ ಜಾರಕಿಹೊಳಿ ಬೆಂಬಲಿಗರು ಶಾಸಕ ಯತ್ನಾಳಗೆ ಎಚ್ಚರಿಕೆ ಕೊಟ್ಟಿದ್ದಾರೆ.

ಸಮಾವೇಶಕ್ಕೆ ಬರಬೇಕು. ಹೋಗಬೇಕು. ಅದನ್ನು ಬಿಟ್ಟು ಯಡಿಯೂರಪ್ಪ, ವಿಜಯೇಂದ್ರ ಬಗ್ಗೆ ಮಾತನಾಡಿದ್ದಂತೆ ನಮ್ಮ ಸಾಹುಕಾರ್ ಬಗ್ಗೆ ಮಾತನಾಡಿದರೆ ವೇದಿಕೆಗೆ ನುಗ್ಗಿ ಹೊಡಿತೀವಿ ಅನ್ನೋ ಎಚ್ಚರಿಕೆ ನೀಡಿದ್ದಕ್ಕೆ ಬಿಗಿವಿನ ವಾತಾವರಣವಿದೆ ಎನ್ನಲಾಗುತ್ತಿದೆ. ಸಮಾವೇಶದಲ್ಲಿ ಶಾಸಕ ಯತ್ನಾಳ ಏನು ಮಾತನಾಡುತ್ತಾರೆ ಅನ್ನೋದರ ಮೇಲೆ ಮುಂದಿನ ಪರಿಸ್ಥಿತಿ ತಿಳಿಯಬಹುದು.




Leave a Reply

Your email address will not be published. Required fields are marked *

error: Content is protected !!