ಅಪಘಾತವಾದರೂ ಪರೀಕ್ಷೆ ಬರೆದ ಪದವಿ ವಿದ್ಯಾರ್ಥಿಗಳು

204

ಪ್ರಜಾಸ್ತ್ರ ಸುದ್ದಿ

ಕುಂದಾಪುರ: ಎರಡು ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದರೂ ಪದವಿ ಪರೀಕ್ಷೆ ಬರೆಯಲು ಆಂಬ್ಯುಲೆನ್ಸ್ ಮೂಲಕ ಕಾಲೇಜಿ ಬಂದಿದ್ದಾರೆ. ಭಂಡಾರ್ಕಾರ್ಸ್ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಾದ  ಮಸಾಯಿದ್ ಹಾಗೂ ವಾಜಿದ್ ಪರೀಕ್ಷೆ ಬರೆದಿದ್ದಾರೆ.

ಶಿರೂರು ನಿವಾಸಿಯಾದ ಮಸಾಯಿದ್, ಗಂಗೊಳ್ಳಿ ನಿವಾಸಿ ವಾಜಿದ್ ನನ್ನ ಕರೆದುಕೊಂಡು ಬೈಕ್ ಮೇಲೆ ಪರೀಕ್ಷೆ ಬರೆಯಲು ಹೊರಟಿದ್ದಾಗ ಗಂಗೊಳ್ಳಿ-ತ್ರಾಸಿ ಸಮೀಪ ಎದುರಿಗೆ ಬರ್ತಿದ್ದ ಇನ್ನೊಂದು ಬೈಕ್ ನಡುವೆ ಅಪಘಾತ ಸಂಭವಿಸಿದೆ.

ಸ್ಥಳೀಯರ ನೆರವಿನಿಂದ ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ಅಲ್ಲಿಂದ ಆಂಬ್ಯುಲೆನ್ಸ್ ಮೂಲಕ ಕಾಲೇಜಿಗೆ ಬಂದು ಪರೀಕ್ಷೆ ಬರೆದಿದ್ದಾರೆ.




Leave a Reply

Your email address will not be published. Required fields are marked *

error: Content is protected !!