ಆಲಮಟ್ಟಿ: ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಇಂದು ಬೆಳಗ್ಗೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಕೋಲ್ಹಾರ ತಾಲೂಕಿನ ಕವಲಗಿ ಗ್ರಾಮದ 25 ವರ್ಷದ ಶಿವಶರಣ ಗುರುಲಿಂಗಪ್ಪ ಬಿರಾದಾರ ಸಾವನ್ನಪ್ಪಿದ ದುರ್ದೈವಿ.
ಕಾಯಿಪಲ್ಯೆ ಮಾರಲು ಬಂದಿದ್ದ ಯುವಕ, ಬೈಕ್ ಮೇಲೆ ಹೋಗುವಾಗ ನಾಯಿಗೆ ಹಾಯಿಸಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಆಲಮಟ್ಟಿ-ನಿಡಗುಂದಿ ರಸ್ತೆಯ ಚಿಮ್ಮಲಗಿ ಮಠದ ಸಮೀಪ ಈ ಅಪಘಾತ ನಡೆದಿದೆ. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.