ವಿಜಯಪುರ: ಬೆಂಗಳೂರಿನ ಪಾದರಾಯನಪುರದಲ್ಲಿ ನಡೆದ ಘಟನೆ ಸಂಬಂಧ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಟ್ವೀಟ್ ಮಾಡಿದ್ದಾರೆ. ಮುಖ್ಯಮಂತ್ರಿಗಳೆ ದೇಶ ದ್ರೋಹಿಗಳನ್ನ ಕಾನೂನು ಮುರಿಯುವ ಗೂಂಡಾಗಳ ಮೇಲೆ ಕ್ರಮ ತೆಗೆದುಕೊಳ್ಳಲು ಯಾವುದೇ ಜನಪ್ರತಿನಿಧಿಗಳ ಅನುಮತಿ ಬೇಕಿಲ್ಲ ಎಂದಿದ್ದಾರೆ.
ಅಂತಹ ಶಾಸಕರ ವಿರುದ್ಧ NSA ಕೆಳಗೆ ಕೇಸ್ ದಾಖಲಿಸಿ. ಮೃದು ಧೋರಣೆ ಸರಿಯಲ್ಲ. ಅಂತವರ ಜೊತೆ ಮಾತುಕತೆ ನಿಲ್ಲಿಸಿ. ಮುಳ್ಳನ್ನು ಮುಳ್ಳಿನಿಂದ ತೆಗೆಯಬೇಕು. ಗುಂಡಂ ದಶಗುಂಣಂ ಇಲ್ಲದಿದ್ದರೆ.. ಹೀಗೆ ವಿಜಯಪುರ ನಗರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಟ್ವೀಟ್ ಮಾಡುವ ಮೂಲಕ, ಘಟನೆಗೆ ಕಾರಣರಾದವರ ವಿರುದ್ಧ ಹಾಗೂ ಶಾಸಕ ಜಮೀರ ಅಹ್ಮದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.