ಪ್ರಜಾಸ್ತ್ರ ಅಪರಾಧ ಸುದ್ದಿ
ಲಕ್ನೋ: ಉತ್ತರ ಪ್ರದೇಶದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಕೇಳಿಸಿದ್ದು, ಬಿಜೆಪಿ ಮುಖಂಡನ ಹತ್ಯೆ ಮಾಡಲಾಗಿದೆ. ಚಪ್ರುಲಿ ಎಂಬಲ್ಲಿ ಬಾಘ್ ಪತ್ ಮಾಜಿ ಜಿಲ್ಲಾಧ್ಯಕ್ಷ, ಬಿಜೆಪಿ ಮುಖಂಡ ಸಂಜಯ ಖೂಖರ್ ಎಂಬುವರ ಹತ್ಯೆಯಾಗಿದೆ.
ಸಂಜಯ ಖೂಖರ್ ತಮ್ಮ ಜಮೀನಿನಲ್ಲಿ ಇಂದು ಮುಂಜಾನೆ ವಾಕ್ ಮಾಡ್ತಿರುವ ಟೈಂನಲ್ಲಿ ಗುಂಡಿನ ದಾಳಿ ಮಾಡಲಾಗಿದೆ. ರಕ್ತದಮಡುವಿನಲ್ಲಿ ಬಿದ್ದಿದ್ದ ಅವರನ್ನ ಆಸ್ಪತ್ರೆಗೆ ಸಾಗಿಸಲಾದ್ರೂ ಅವರು ಬದುಕುಳಿಯಲಿಲ್ಲ. ಆರೋಪಿಗಳ ಪತ್ತೆಗೆ ಪೊಲೀಸ್ರು ಬಲೆ ಬೀಸಿದ್ದಾರೆ.