ಹೈದ್ರಾಬಾದ್ ಗೆ ಪ್ರಧಾನಿ.. ಮತ್ತೆ ಸ್ವಾಗತಿಸಲ್ಲ ಕೆಸಿಆರ್!

183

ಪ್ರಜಾಸ್ತ್ರ ಸುದ್ದಿ

ಹೈದ್ರಾಬಾದ್: ಶನಿವಾರ ಹಾಗೂ ಭಾನುವಾರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಹೀಗಾಗಿ ಇಂದು ಸಂಜೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ಶಿಷ್ಠಾಚಾರದಿಂದ ಆ ರಾಜ್ಯದ ಮುಖ್ಯಮಂತ್ರಿಗಳು ಅವರನ್ನು ಸ್ವಾಗತಿಸಬೇಕು. ಆದರೆ, ಕೆ ಚಂದ್ರಶೇಖರ್ ರಾವ್ ಮತ್ತೆ ಪ್ರಧಾನಿಯನ್ನು ಸ್ವಾಗತಿಸದೆ ನುಣುಚಿಕೊಳ್ಳುತ್ತಿದ್ದಾರಂತೆ.

ಇತ್ತೀಚೆಗೆ ಪ್ರಧಾನಿ ಮೋದಿ ಹೈದ್ರಾಬಾದ್ ಗೆ ಬಂದಾಗಿ ಸಿಎಂ ಕೆಸಿಆರ್ ಬೆಂಗಳೂರಿಗೆ ಬಂದು ಜೆಡಿಎಸ್ ವರಿಷ್ಠರನ್ನು ಭೇಟಿಯಾಗಿದ್ದರು. ಆಗ ಅವರ ಸಚಿವ ಸಂಪುಟದ ಸಹೋದ್ಯೋಗಿ ಸ್ವಾಗತಿಸಿದ್ದರು. ಇಂದು ಸಹ ಪಿಎಂ ಸ್ವಾಗತದಿಂದ ದೂರ ಉಳಿದಿದ್ದು, ಪಶು ಸಂಗೋಪನಾ ಸಚಿವ ತಲಸಾನಿ ಶ್ರೀನಿವಾಸ್ ಯಾದವ್ ಪ್ರಧಾನಿಯನ್ನು ಸ್ವಾಗತಿಸಲಿದ್ದಾರೆ ಎಂದು ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!