ಉಪ ಚುನಾವಣೆಯಲ್ಲಿ ‘ಕಮಲ’ಕ್ಕೆ ‘ಕೈ’ ಚಾಚುವುದಿಲ್ಲವೆಂದ ಹೆಚ್ಡಿಡಿ

394

ಬೆಂಗಳೂರು: ಡಿಸೆಂಬರ್ 5ರಂದು ನಡೆಯುವ ರಾಜ್ಯದ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ಹೇಳಿದ್ದಾರೆ.

ಬಿಜೆಪಿ ಹೆಚ್ಚಿಲ್ಲ. ಕಾಂಗ್ರೆಸ್ ಕಡಿಮೆಯಿಲ್ಲ. ಇವರ ಜೊತೆ ಚುನಾವಣೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಎರಡೂ ಪಕ್ಷಗಳಿಂದ ಸಮಾನ ಅಂತರ ಕಾಯ್ದುಕೊಳ್ಳುವುದಾಗಿ ತಿಳಿಸಿದ್ದಾರೆ. 2018ರಲ್ಲಿ ಫಲಿತಾಂಶ ಬಂದ್ಮೇಲೆ ಕಾಂಗ್ರೆಸ್ ಜೊತೆ ಮೈತ್ರಿಗೆ ನಾನು ಮೊದಲು ಒಪ್ಪಿರಲಿಲ್ಲ. ಕಾಂಗ್ರೆಸ್ ನಡೆಸಿದ ಸುದೀರ್ಘ ಮನವೊಲಿಕೆ ಪ್ರಯತ್ನದಿಂದಾಗಿ ಮನಸ್ಸು ಬದಲಿಸಿದೆ ಅಂತಾ ಹೇಳಿದ್ದಾರೆ.

ಉಪ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡ್ತೀವಿ. ಅಗತ್ಯ ಬಿದ್ದಾಗ ನಮ್ಮನ್ನ ಬಳಸಿಕೊಳ್ತಾರೆ. ಆಮೇಲೆ ನಾಶ ಪಡಿಸುವ ಕೆಲಸ ಮಾಡ್ತಾರೆ. ಎರಡೂ ಪಕ್ಷಗಳ ಗುಣ ಒಂದೇ ಆಗಿದೆ ಅಂತಾ ಹೇಳಿದ್ದಾರೆ. ದೊಡ್ಡ ಗೌಡರ ಈ ಹೇಳಿಕೆ ಮತ್ತೆ ಯಾವ ಟೈಂನಲ್ಲಿ ಬದಲಾಗುತ್ತೆ ಹೇಳಕ್ಕಗಲ್ಲ ಅನ್ನೋದು ರಾಜಕೀಯ ಪಂಡಿತರ ಮಾತು.




Leave a Reply

Your email address will not be published. Required fields are marked *

error: Content is protected !!