ಬ್ರೇಕಿಂಗ್ ನ್ಯೂಸ್:
ನವದೆಹಲಿ: ಪೌರತ್ವ ಕಾಯ್ದೆ ತಿದ್ದುಪಡಿ ವಿರುದ್ಧ ಇಲ್ಲಿನ ಜಾಮೀಯ ಮಿಲಿಯ ಇಸ್ಲಾಮಿಯ ವಿವಿ ಬಳಿ ಇಂದು ಮಧ್ಯಾಹ್ನ ನಡೆದ ಪ್ರತಿಭಟನೆ ವೇಳೆ ಗನ್ ಹಿಡಿದ ವ್ಯಕ್ತಿಯೊಬ್ಬ ಮನಬಂದಂತೆ ಗುಂಡು ಹಾರಿಸಿದ್ದ. ಗನ್ ಹಿಡಿದ ಅಟ್ಟಹಾಸ ಮೆರದವನನ್ನ ಪೊಲೀಸ್ರು ಬಂಧಿಸಿದ್ದಾರೆ.
ಪ್ರತಿಭಟನೆಗೆ ಪೊಲೀಸ್ರು ಅನುಮತಿ ನೀಡದೆ ಇರುವ ಟೈಂನಲ್ಲಿ ಒಂದಿಷ್ಟು ಮಾತಿನ ವಾಗ್ವಾದ ನಡೆದಿದೆ. ಆಗ ರಸ್ತೆಗೆ ನುಗ್ಗಿದ ಪಿಸ್ತೂಲ್ ದಾರಿಯೊಬ್ಬ ಗುಂಡು ಹಾರಿಸಿದ್ದಾನೆ. ಈ ವೇಳೆ ಪರಿಸ್ಥಿತಿ ಸಾಕಷ್ಟು ಹಿಂಸೆಗೆ ತಿರುಗಿದೆ. ಈ ವೇಳೆ ಶಬಾಜ್ ಅನ್ನೋ ವಿದ್ಯಾರ್ಥಿಗೆ ಗುಂಡು ತಗುಲಿ ಗಾಯಗೊಂಡಿದ್ದಾನೆ. ತಕ್ಷಣ ಆತನನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಷ್ಟೆಲ್ಲ ಭಯ ಸೃಷ್ಟಿಸಿದವನನ್ನು ಪೊಲೀಸ್ರು ಬಂಧಿಸಿದ್ದಾರೆ.
19 ವರ್ಷದ ರಾಮ ಭಗತ ಗೋಪಾಲ ಶರ್ಮಾ ಎಂಬಾತನೇ ಗುಂಡು ಹಾರಿಸಿದ ದುಷ್ಕರ್ಮಿ. ಈತ ಉತ್ತರ ಪ್ರದೇಶದ ಬುದ್ಧ ನಗರದವನು. ಪ್ರತಿಭಟನೆ ವೇಳೆ ಬಂದು ಗುಂಡಿನ ದಾಳಿ ನಡೆಸುವ ಮೊದ್ಲು ಫೇಸ್ ಬುಕ್ ನಲ್ಲಿ ಪೋಸ್ಟ್ ವೊಂದು ಹಾಕಿದ್ದಾನೆ. ಇಲ್ಲಿ ನಾನೊಬ್ಬನೆ ಹಿಂದೂ ಎಂದು ಹಿಂದಿಯಲ್ಲಿ ಪೋಸ್ಟ್ ಹಾಕಿದ್ದಾನೆ. ನನ್ನ ಮನೆಯನ್ನ ನೋಡಿಕೊಳ್ಳಿ ಎಂದಿದ್ದಾನೆ. ಇಷ್ಟೆಲ್ಲ ಮಾಡಿದವನು ಫೇಸ್ ಬುಕ್ ಲೈವ್ ಬಂದು 30-40 ಸೆಂಕೆಂಡ್ ನಲ್ಲಿ ಕಟ್ ಮಾಡಿದ್ದಾನೆ.
ಗುಂಡು ಹಾರಿಸಿದ ಕೆಲ ಹೊತ್ತಿನಲ್ಲಿಯೇ ಈತನನ್ನು ಅರೆಸ್ಟ್ ಮಾಡಲಾಗಿದೆ. ಕೇಂದ್ರ ಸಚಿವ ಅನುರಾಗ ಠಾಕೂರ್ ಹೇಳಿಕೆಯಿಂದ ನಾನು ಪ್ರೇರತನಾಗಿದ್ದೇನೆ ಎಂದು ವಿಚಾರಣೆ ವೇಳೆ ಹೇಳಿದ್ದಾನೆ ಅಂತಾ ಹೇಳಲಾಗ್ತಿದೆ.