ನವದೆಹಲಿ: ಸಂಸತ್ ಬಜೆಟ್ ಅಧಿವೇಶನ ಇಂದು ಶುರುವಾಗಿದೆ. ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ ಭಾಷಣ ಮಾಡಿದ್ದಾರೆ. ಸುಗಮ ಕಲಾಪಕ್ಕೆ ಪ್ರಧಾನಿ ಮೋದಿ ಮನವಿ ಮಾಡಿದ್ದು, ಆರ್ಥಿಕ ವಿಚಾರಗಳ ಬಗ್ಗೆ ಬಹುದೊಡ್ಡ ಚರ್ಚೆ ನಡೆಯಲಿದೆ.
ಜಂಟಿ ಅಧಿವೇಶನ ಉದ್ದೇಶಿಸಿ ಮಾತ್ನಾಡಿದ ರಾಷ್ಟ್ರಪತಿ, ಸರ್ಕಾರ ತ್ರಿವಳಿ ತಲಾಕ್ ನ್ನು ನಿಷೇಧಿಸಿದೆ. ಚಿಟ್ ಫಂಡ್ ತಪ್ಪಿಸಲು ಕಾಯ್ದೆ, ರಾಮ ಜನ್ಮಭೂಮಿ ವಿಚಾರದಲ್ಲಿ ಸುಪ್ರೀಂ ತೀರ್ಪು ಸ್ವಾಗತಾರ್ಹವೆಂದು ಹೇಳಿದ್ರು. ನವ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸರ್ಕಾರದ ಉದ್ದೇಶವಾಗಿದ್ದು ಎಲ್ಲ ಧರ್ಮದವರಿಗೂ ಆದ್ಯತೆ ನೀಡುತ್ತೆ ಅಂತಾ ಹೇಳಿದ್ರು.