ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯಾದ್ಯಂತ ಕಳೆದೊಂದು ವಾರದಿಂದ ಭರ್ಜರಿ ಮಳೆಯಾಗುತ್ತಿದೆ. ಸಿಲಿಕಾನ್ ಸಿಟಿ ಜನರು ವರುಣನ ಆರ್ಭಟಕ್ಕೆ ಅಕ್ಷರಶಃ ನಲುಗಿ ಹೋಗಿದ್ದಾರೆ. ಇದು ಪ್ರತಿ ವರ್ಷದ ಗೋಳಾಗಿದ್ದು, ರಾಜಕಾರಣಿಗಳ ವಿರುದ್ಧ ಹಿಡಿ ಶಾಪ ಹಾಕುತ್ತಿದ್ದಾರೆ.
ಇನ್ನು ಹಾಸನ, ಮೈಸೂರು, ಕೊಡುಗು, ಧಾರವಾಡ, ವಿಜಯಪುರ ಸೇರಿದಂತೆ ಎಲ್ಲೆಡೆ ವ್ಯಾಪಕ ಮಳೆಯಾಗುತ್ತಿದೆ. ಮುಂಗಾರು ಆರಂಭಕ್ಕೂ ಮೊದಲೇ ವರುಣ ಎಂಟ್ರಿಯಾಗಿದ್ದು, ಇದು ಚಂಡಮಾರುತದ ಪರಿಣಾಮ ಅಥವ ಅವಧಿಪೂರ್ವ ಮಳೆ ಶುರುವಾಗಿದೆಯಾ ಅನ್ನೋದು ಜನರಿಗೆ ತಿಳಿಯದಾಗಿದೆ.