ನಿನ್ನೆ ಭೈರಪ್ಪ.. ಇಂದು ಕಣವಿ ದೇಣಿಗೆ

388

ಧಾರವಾಡ: ಸಿಎಂ ಹಾಗೂ ಪಿಎಂ ಪರಿಹಾರ ನಿಧಿಗೆ ಸಾಹಿತಿಗಳು ಸಹ ದೇಣಿಗೆ ನೀಡ್ತಿದ್ದಾರೆ. ಚಂಬೆಳಕಿನ ಕವಿ ಚೆನ್ನವೀರ ಕಣವಿ ಅವರು ಪಿಎಂ ಪರಿಹಾರ ನಿಧಿಗೆ 1 ಲಕ್ಷ ರೂಪಾಯಿ ನೀಡಿದ್ದಾರೆ. ಧಾರವಾಡ ನಗರ ಶಾಸಕ ಅರವಿಂದ ಬೆಲ್ಲದ ಮೂಲಕ ಚೆಕ್ ನೀಡಿದ್ದಾರೆ.

ಈ ವೇಳೆ ಮಾತ್ನಾಡಿ ಅವರು, ಮನೆಯಿಂದ ಯಾರೂ ಹೊರಗೆ ಬರಬೇಡಿ. ಲಾಕ್ ಡೌನ್ ಮುಂದೂಡುವುದು ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇನ್ನು ನಿನ್ನೆ ಖ್ಯಾತ ಕಾದಂಬರಿಕಾರ ಎಸ್.ಎಲ್ ಭೈರಪ್ಪನವರು ಸಿಎಂ ಪರಿಹಾರ ನಿಧಿಗೆ ಹಣ ನೀಡಿದ್ರು. ಮೈಸೂರಿನಲ್ಲಿ ಒಂದು ಲಕ್ಷ ರೂಪಾಯಿ ಚೆಕ್ ನ್ನ ಸಚಿವ ವಿ.ಸೋಮಣ್ಣನವರ ಮೂಲಕ ಸಿಎಂ ಪರಿಹಾರ ನಿಧಿಗೆ ನೀಡಿದ್ದಾರೆ. ಈ ವೇಳೆ ಸಂಸದ ಪ್ರತಾಪ ಸಿಂಹ ಹಾಜರಿದ್ರು.




Leave a Reply

Your email address will not be published. Required fields are marked *

error: Content is protected !!