ತುಮಕೂರು: ಮಹಾಮಾರಿ ಕರೋನಾದಿಂದಾಗಿ ಇಡೀ ದೇಶದಾದ್ಯಂತ ಲಾಕ್ ಡೌನ್ ಘೋಷಣೆಯಾಗಿದೆ. ಆದ್ರೆ, ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ಶಾಸಕರೆ ಅದನ್ನ ಗಾಳಿಗೆ ತೂರಿದ್ದಾರೆ. ತುರುವೇಕೆರೆ ಬಿಜಿಪಿ ಶಾಸಕ ಮಸಾಲೆ ಜಯರಾಂ ಭರ್ಜರಿಯಾಗಿ ಹುಟ್ಟು ಹಬ್ಬವನ್ನ ಆಚರಣೆ ಮಾಡಿಕೊಂಡಿದ್ದಾರೆ.
ಗುಬ್ಬಿ ತಾಲೂಕಿನ ಇಡಗೂರು ಗ್ರಾಮದಲ್ಲಿ ಬಾಡೂಟ ಹಾಕಿಸುವ ಮೂಲಕ ಲಾಕ್ ಡೌನ್ ಗೂ ಕೇರ್ ಮಾಡದೆ ನೂರಾರು ಜನರನ್ನ ಸೇರಿಸಿ ಹುಟ್ಟು ಹಬ್ಬ ಆಚರಿಸಿದ್ದಾರೆ. ಸಾಮಾಜಿಕ ಅಂತರ ಗಾಳಿಗೆ ತೂರಿ, 144 ಸೆಕ್ಷನ್ ಜಾರಿಯಲ್ಲಿದ್ರೂ ನೂರಾರು ಜನರನ್ನ ಸೇರಿಸಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಸಿಎಂ ಬಿ.ಎಸ್ ಯಡಿಯೂರಪ್ಪನವರು ಇಂಥಾ ಶಾಕರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.