ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬೆಂಗಳೂರು: ಸ್ಯಾಂಡಲ್ ವುಡ್ ನಿರ್ದೇಶಕ, ಕಲಾ ಸಾಮ್ರಾಟ ಖ್ಯಾತಿಯ ಎಸ್.ನಾರಾಯಣ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಕನ್ನಡ ಚಿತ್ರಂಗದಲ್ಲಿ ಎಸ್.ನಾರಾಯಣ ಅವರ ಸೇವೆಯನ್ನ ಗುರುತಿಸಿ, ಯೂನಿವರ್ಸಲ್ ಡೆವಲಪ್ ಮೆಂಟ್ ಕೌನ್ಸಿಲ್ ಗೌರವ ಡಾಕ್ಟೇರ್ ನೀಡಿ ಗೌರವಿಸಿದೆ.
ನಟ ರಘುವೀರ ನಟನೆಯ ಚೈತ್ರದ ಪ್ರೇಮಾಂಜಲಿ ಚಿತ್ರದ ಮೂಲಕ ನಿರ್ದೇಶಕನ ಕ್ಯಾಪ್ ತೊಟ್ಟರು. ಇದುವರೆಗೂ 49 ಚಿತ್ರಗಳನ್ನ ನಿರ್ದೇಶನ ಮಾಡಿದ್ದಾರೆ. ಡಾ.ರಾಜಕುಮಾರ, ಡಾ.ವಿಷ್ಣುವರ್ಧನ, ರವಿಚಂದ್ರನ್ ಸೇರಿದಂತೆ ಹಲವು ಖ್ಯಾತ ನಟರ ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ.