ಒಂದ್ಕಡೆ ಟೆನ್ಷನ್.. ಇನ್ನೊಂದ್ಕಡೆ ರಿಲೀಫ್..

326

ಬೆಂಗಳೂರು/ನವದೆಹಲಿ: ಇಂದು 15 ಜನ ಅನರ್ಹ ಶಾಸಕರ ರಾಜಕೀಯ ಭವಿಷ್ಯ ನಿರ್ಧಾರವಾಗುತ್ತೆ ಎನ್ನಲಾಗ್ತಿತ್ತು. ಆದ್ರೆ, ಅದು ಬುಧುವಾರಕ್ಕೆ ಹೋಗಿದೆ. ಅನರ್ಹ ಶಾಸಕರು ಸಲ್ಲಿಸಿದ ಅರ್ಜಿ ವಿಚಾರಣೆಯನ್ನ ಸುಪ್ರೀಂ ಕೋರ್ಟ್ ಬುಧುವಾರಕ್ಕೆ ಮುಂದೂಡಿದೆ.

ಅಕ್ಟೋಬರ್ 21ಕ್ಕೆ 15 ಕ್ಷೇತ್ರಗಳಲ್ಲಿ ಉಪ ಚುನಾವಣೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಹೀಗಾಗಿ ಇವರಿಗೆ ಟೆನ್ಷನ್ ಶುರುವಾಗಿದೆ. ಅದು ಇವತ್ತು ಮುಗಿಯುತ್ತೆ ಅಂದ್ಕೊಂಡಿದ್ರು. ಆದ್ರೆ, ಅದು ಎರಡು ದಿನ ಮುಂದಕ್ಕೆ ಹೋಗಿದೆ. ಇದರ ನಡುವೆ ರಿಲೀಫ್ ಏನು ಅಂದ್ರೆ, ಉಪ ಚುನಾವಣೆಗೆ ಈ ಅನರ್ಹ ಶಾಸಕರು ನಿಲ್ಲಲು ಯಾವುದೇ ಅಭ್ಯಂತರವಿಲ್ಲ ಎಂದು ಚುನಾವಣಾ ಆಯೋಗ ಹೇಳಿದೆ.

ಉಪ ಚುನಾವಣೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ಇವರು ಕೋರ್ಟ್ ಮೊರೆ ಹೋಗಿದ್ರು. ರಾಜ್ಯ ಚುನಾವಣಾ ಆಯೋಗದ ಪರವಾಗಿ ರಾಕೇಶ ದ್ವಿವೇದಿ ವಾದ ಮಂಡಿಸಿದ್ದು, ಅನರ್ಹರು ಚುನವಾಣೆಗೆ ನಿಲ್ಲಲು ಯಾವುದೇ ಆಕ್ಷೇವಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದಾರೆ. ಹೀಗಾಗಿ ಒಂದ್ಕಡೆ ಟೆನ್ಷನ್. ಇನ್ನೊಂದ್ಕಡೆ ರಿಲೀಫ್.




Leave a Reply

Your email address will not be published. Required fields are marked *

error: Content is protected !!