ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಸ್ಯಾಂಡಲ್ ವುಡ್ ಅಂಗಳದಲ್ಲಿ ಡ್ರಗ್ಸ್ ದಂಧೆ ಸಂಬಂಧ ಭರ್ಜರಿಯಾಗಿ ಕಾರ್ಯಾಚರಣೆ ನಡೆಯುತ್ತಿದೆ. ಚಿತ್ರರಂಗ ಸೇರಿದಂತೆ ರಾಜಕೀಯ ಮಕ್ಕಳು, ಉದ್ಯಮಿಗಳು ಸಹ ಇದರಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ. ಹೀಗಾಗಿ ಅನೇಕರಲ್ಲಿ ನಡುಕ ಶುರುವಾಗಿದೆ.
ಸಿಸಿಬಿ ಹಾಗೂ ಎನ್ ಸಿಬಿ ಕಟ್ಟುನಿಟ್ಟಾಗಿ ತನಿಖೆ ನಡೆಸ್ತಿರುವ ಹೊತ್ತಿನಲ್ಲಿ ಪೊಲೀಸ್ ಅಧಿಕಾರಿಗಳಿಂದಲೇ ಮಾಹಿತಿ ಸೋರಿಕೆಯಾಗಿದೆ. ಈ ಸಂಬಂಧ ಓರ್ವ ಎಸಿಪಿ ಹಾಗೂ ಓರ್ವ ಹೆಡ್ ಕಾನ್ಸ್ ಟೇಬಲ್ ಅಮಾನತು ಮಾಡಲಾಗಿದೆ. ಕಸ್ಟಡಿಯಲ್ಲಿರುವ ಆರೋಪಿ ವಿರೇಶ ಖನ್ನಾಗೆ ಮೊಬೈಲ್ ಕೊಟ್ಟು ಗೆಳೆಯರೊಂದಿಗೆ ಚರ್ಚೆ ನಡೆಸಲು ಅವಕಾಶ ನೀಡಿದ್ರು ಎಂದು ತಿಳಿದು ಬಂದಿದೆ.
ಹಣದ ಆಸೆಗೆ ಮುಂಜಾನೆ ಫೋನ್ ಕೊಟ್ಟು ತನಿಖೆಯ ಮಾಹಿತಿ ಸೋರಿಕೆ ಮಾಡಿದ್ದಾರೆ. ಅಲ್ದೇ, ಈ ಪ್ರಕರಣದ ಪ್ರಮುಖ ಆರೋಪಿ ಶೇಖ್ ಫಾಜಿಲ್ ನ ಮನೆಯವರೊಂದಿಗೆ ಸಂಪರ್ಕ ಸಾಧಿಸಿದ್ರು ಅನ್ನೋದು ತಿಳಿದು ಬಂದಿದೆ. ಅಲ್ದೇ, ಫಾಜಿಲ್ ವಕೀಲರೊಂದಿಗೆ ಹೆಡ್ ಕಾನ್ಸ್ ಟೇಬಲ್ ಮಲ್ಲಿಕಾರ್ಜುನ ಮಾತ್ನಾಡಿರುವ ಆಡಿಯೋ ಕ್ಲಿಪ್ ಸಹ ಸಿಕ್ಕಿದೆ. ಹೀಗಾಗಿ ಎಸಿಪಿ ಮುದವಿ ಹಾಗೂ ಹೆಡ್ ಕಾನ್ಸ್ ಟೇಬಲ್ ಮಲ್ಲಿಕಾರ್ಜುನ ಎಂಬುವರನ್ನ ಅಮಾನತು ಮಾಡಲಾಗಿದೆ. ಇದನ್ನ ನೋಡಿದ್ರೆ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ.