ಸರ್ಕಾರದ ವಿರುದ್ಧ ಯತ್ನಾಳ ಮಾತನ್ನೇ ಅಸ್ತ್ರ ಮಾಡಿಕೊಂಡ ಎಂಬಿಪಿ

385

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ ಮಾತನ್ನೇ ಮಾಜಿ ಸಚಿವ ಎಂ.ಬಿ ಪಾಟೀಲ ಅಸ್ತ್ರ ಮಾಡಿಕೊಂಡಿದ್ದಾರೆ. ನಗರದಲ್ಲಿ ಬುಧವಾರ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ, ಹೆಚ್ಡಿಕೆ ಸಿಎಂ ಆಗಿದ್ದಾಗ ನೀಡಿದ ನಗರಾಭಿವೃದ್ಧಿ ಹಣವನ್ನ ಸಿಎಂ ವಾಪಸ್ ಪಡೆದಿದ್ದಾರೆ ಎಂದು ಯತ್ನಾಳ ಹೇಳಿದ್ರು. ಇದನ್ನೇ ಎಂಬಿಪಿ ಅಸ್ತ್ರ ಮಾಡಿಕೊಂಡಿದ್ದಾರೆ.

ನಗರದಲ್ಲಿ ಗಣೇಶ ಮಹಾಮಂಡಳದ ವಿಘ್ನೇಶ್ವರ ಮೂರ್ತಿಗೆ ಪೂಜೆ ಸಲ್ಲಿಸಿ ಮಾತ್ನಾಡಿದ ಅವರ, ನಗರದ ಅಭಿವೃದ್ಧಿಗಾಗಿ ಶಾಸಕರಿಗೆ ನೀಡಲು ಸರ್ಕಾರದ ಬಳಿಯೇ ಹಣವಿಲ್ಲ. ಸರ್ಕಾರ ದಿವಾಳಿ ಆಗಿರುವುದಕ್ಕೆ ಸ್ವಪಕ್ಷೀಯ ಶಾಸಕರ ಹೇಳಿಕೆಯೇ ನಿದರ್ಶನವೆಂದು ವಾಗ್ದಾಳಿ ನಡೆಸಿದ್ರು. ಅಲ್ದೇ, ನಗರದಲ್ಲಿ ಗುಂಡಿ ಬಿದ್ದ ರಸ್ತೆಗಳಿಗೆ ಮಣ್ಣು ಹಾಕಿಸಲು ಸರ್ಕಾರದ ಬಳಿ ದುಡ್ಡಿಲ್ಲವೆಂದು ಟೀಕೆ ಮಾಡಿದ್ರು.




Leave a Reply

Your email address will not be published. Required fields are marked *

error: Content is protected !!