ಪ್ರಜಾಸ್ತ್ರ ಕ್ರೀಡಾ ಸುದ್ದಿ
ಇತ್ತೀಚೆಗೆ ಧೋನಿ, ರೈನಾ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ರು. ಇದಾದ ಬಳಿಕ ಇವರಿಗಾಗಿ ವಿದಾಯದ ಪಂದ್ಯ ಆಡಿಸಬೇಕು ಅನ್ನೋ ಮಾತುಗಳು ಕೇಳಿ ಬರ್ತಿವೆ. ಇದಕ್ಕೆ ಧ್ವನಿಗೂಡಿಸಿರುವ ಮಾಜಿ ವೇಗಿ ಪಠಾಣ್, ಧೋನಿ ಹಾಗೂ ರೈನಾಗೆ ಮಾತ್ರವಲ್ಲ. ವಿದಾಯದ ಪಂದ್ಯ ಆಡದೆ ನಿವೃತ್ತಿ ಘೋಷಿಸಿದ ಆಟಗಾರರಿಗಾಗಿ ಮ್ಯಾಚ್ ಆಡಿಸಬೇಕು ಎಂದಿದ್ದಾರೆ.
ತಮ್ಮ ಟ್ವೀಟರ್ ಅಕೌಂಟ್ ನಲ್ಲಿ ಈ ಬಗ್ಗೆ ಬರೆದಿರುವ ಇರ್ಫಾನ್ ಪಠಾಣ್, ಗೌತಮ ಗಂಭೀರ್, ವಿರೇಂದ್ರ ಸಹ್ವಾಗ್, ರಾಹುಲ ದ್ರಾವಿಡ್, ವಿವಿಎಸ್ ಲಕ್ಷ್ಮಣ, ಯುವರಾಜ ಸಿಂಗ್, ಸುರೇಶ ರೈನಾ, ಎಂ.ಎಸ್ ಧೋನಿ, ಇರ್ಫಾನ್ ಪಠಾಣ್, ಅಜಿತ ಅಗರ್ಕರ್, ಜಹೀರ್ ಖಾನ್ ಹಾಗೂ ಪ್ರಗ್ಯಾನ್ ಓಜಾ ಸೇರಿದ 11 ಆಟಗಾರರು ಹೆಸರು ಬರೆದಿದ್ದಾರೆ.
ನಿವೃತ್ತಿ ಘೋಷಿಸಿದ ಹಾಗೂ ಪ್ರಸ್ತುತ ಇರುವ ತಂಡದ ನಡುವೆ ವಿದಾಯದ ಪಂದ್ಯ ಆಡಿಸಲು ಮನವಿ ಮಾಡಿದ್ದಾರೆ. ಅಲ್ಲಿಗೆ ಇದೊಂದು ರೀತಿ ಇಂಡಿಯಾ ವರ್ಸಸ್ ಇಂಡಿಯಾ ಮ್ಯಾಚ್ ಆಗಿದ್ದು, ಕ್ರಿಕೆಟ್ ಪ್ರೇಮಿಗಳು ಸಖತ್ ಎಂಜಾಯ್ ಮಾಡಬಹುದಾಗಿದೆ.