ಪ್ರಜಾಸ್ತ್ರ ಅಪರಾಧ ಸುದ್ದಿ
ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ ಕಿಡ್ನಾಪ್ ಪ್ರಕರಣ ಸಂಬಂಧ ನಾಲ್ವರನ್ನ ಬಂಧಿಸಲಾಗಿದೆ. ಇದರೊಂದಿಗೆ ಇದುವರೆಗೂ 6 ಮಂದಿಯನ್ನ ಅರೆಸ್ಟ್ ಮಾಡಿದಂತಾಗಿದೆ. ನವೆಂಬರ್ 25ರಂದು ವರ್ತೂರು ಪ್ರಕಾಶ ಹಾಗೂ ಕಾರ್ ಚಾಲಕನ ಸಮೇತ ಅಪಹರಣ ಮಾಡಲಾಗಿತ್ತು.
ಈ ಪ್ರಕರಣದಲ್ಲಿ ಈಗಾಗ್ಲೇ 30ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಲಾಗಿದೆ. ಪ್ರಮುಖ ಆರೋಪಿ ತಮಿಳುನಾಡಿನ ಹೊಸೂರು ಮೂಲದವನು ಎಂದು ಹೇಳಲಾಗ್ತಿದೆ. ಅವನಿಗಾಗಿ ತೀವ್ರ ಕಾರ್ಯಾಚರಣೆ ನಡೆದಿದ್ದು, ಅವನು ಸಿಕ್ಕ ಮೇಲೆ ಪ್ರಕರಣದ ಸತ್ಯಾಸತ್ಯ ಹೊರಬರಲಿದೆ.