ರಾಮನ ಹೆಸರಲ್ಲಿ ನೀವು ರಾಜಕೀಯ ಮಾಡುತ್ತಿದ್ದೀರಿ: ಹೆಚ್ಡಿಕೆ

279

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಮ ಮಂದಿರ ನಿರ್ಮಾಣ ಸಂಬಂಧ ಸಾರ್ವಜನಿಕರದಿಂದ ದೇಣಿಗೆ ಸಂಗ್ರಹ ಮಾಡಲಾಗ್ತಿದೆ. ಈ ಬಗ್ಗೆ ಟ್ವೀಟ್ ಮಾಡಿದ್ದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಹಣ ಕೊಡದೆ ಇರುವವರ ಮನೆ ಗುರುತು ಮಾಡಲಾಗ್ತಿದೆ. ಇದ್ರಿಂದ ನನ್ಗೆ ಆತಂಕವಾಗ್ತಿದೆ ಎಂದು ಹೇಳಿದ್ರು. ಇದಕ್ಕೆ ಸಾಕಷ್ಟು ಪರ ವಿರೋಧಗಳು ವ್ಯಕ್ತವಾಗಿದೆ.

ತಮ್ಮ ಹೇಳಿಕೆ ಸಂಬಂಧ ಎದ್ದಿರುವ ಮಾತುಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಬೀದಿ ಬೀದಿಯಲ್ಲಿ ದೇವರ ಹೆಸರಲ್ಲಿ ಹಣ ಸಂಗ್ರಹ ಮಾಡುವುದು ಸರಿಯಲ್ಲ. ಪೋಲಿ ಪುಂಡರು ಸಹ ಹಣ ಸಂಗ್ರಹ ಮಾಡ್ತಿದ್ದಾರೆ. ಅಲ್ದೇ, ದೇವರ ಹೆಸರಲ್ಲಿ ಸಂಗ್ರಹಿಸಿದ ಹಣವನ್ನ ದುರ್ಬಳಕೆ ಮಾಡಿಕೊಳ್ತಿದ್ದಾರೆ. ಅದು ಪಾರದರ್ಶಕತೆಯಿಂದ ಇರಲಿ ಎಂದರು.

ಶಿವಮೊಗ್ಗದಲ್ಲಿ ನಾನು ನೀಡಿದ ಹೇಳಿಕೆಯಲ್ಲಿ ಬಿಜೆಪಿಯನ್ನಾಗಲಿ, ಸರ್ಕಾರವನ್ನಾಗಿ ಬೈದಿಲ್ಲ. ರಾಮನಿಗೆ ಅವಮಾನವಾಗು ರೀತಿ ಮಾತ್ನಾಡಿಲ್ಲ. ದೇಣಿಗೆ ಸಂಗ್ರಹದ ಹೆಸರಿನಲ್ಲಿ ಕೆಲವರು ಹಣ ದುರ್ಬಳಕೆ ಮಾಡಿಕೊಳ್ತಿದ್ದಾರೆ. ರಾಮನ ಹೆಸರಿನಲ್ಲಿ ರಾಜಕೀಯ ಮಾಡ್ತಿರುವವರು ನೀವು ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಕಿಡಿ ಕಾರಿದರು.




Leave a Reply

Your email address will not be published. Required fields are marked *

error: Content is protected !!