ಪ್ರಜಾಸ್ತ್ರ ಸುದ್ದಿ
ಮೈಸೂರು: ಹುಣಸೂರು ತಾಲೂಕಿನ ಹಲವು ಕಡೆ ಅಕಾಲಿಕವಾಗಿ ಸುರಿದ ಮಳೆಯಿಂದಾಗಿ ಬೆಳೆಗಳು ಹಾಳಾಗಿವೆ. ಅದರಲ್ಲೂ ಹನಗೋಡು ಹೋಬಳಿಯಲ್ಲಿ ಭರ್ಜರಿ ಮಳೆಯಾಗಿದೆ. ಇದ್ರಿಂದಾಗಿ ಮೆಣಸಿನ ಬೆಳೆ ಸಂಪೂರ್ಣ ಹಾಳಾಗಿದೆ.
ಇನ್ನು ಕಾಳಬೋಚನಹಳ್ಳಿಯ ಪುಟ್ಟಸ್ವಾಮಿಗೌಡ ಎಂಬುವರ 8 ಎಕರೆ ತೋಟದಲ್ಲಿ ಬೆಳೆದ ಮೆಣಿಸಿನ ಬೆಳೆ ನೆಲಕಚ್ಚಿದೆ. ಇದಕ್ಕಾಗಿ ರೈತ ಸುಮಾರು 5 ಲಕ್ಷ ರೂಪಾಯಿ ಖರ್ಚು ಮಾಡಿದ್ರಂತೆ. ಅಕಾಲಿಕ ಮಳೆಗೆ ಎಲ್ಲವೂ ಹಾಳಾಗಿದೆ.