ಕಾಗವಾಡದಲ್ಲಿ ತಡರಾತ್ರಿ ದುರಂತ: ಗ್ರಾ.ಪಂ ಸದಸ್ಯ ಸಜೀವ ದಹನ

687

ಪ್ರಜಾಸ್ತ್ರ ಸುದ್ದಿ

ಕಾಗವಾಡ: ಬುಧವಾರ ತಡರಾತ್ರಿ ಮನೆಗೆ ಬೆಂಕಿ ಬಿದ್ದು ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ನಿಧನರಾದ ಘಟನೆ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ನಡೆದಿದೆ. ಸೋಮಶೇಖರ ಶಿವಾನಂದ ಪಾಟೀಲ(32) ಮೃತ ದುರ್ದೈವಿ.

ಶಿರಗುಪ್ಪಿ ಗ್ರಾಮ ಪಂಚಾಯ್ತಿ ಸದಸ್ಯರಾಗಿದ್ದ ಸೋಮಶೇಖರ, ಮನೆಯಲ್ಲಿ ಒಬ್ಬರೆ ಮಲಗಿದ್ರು. ಎಸಿಯ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡು ಇಡೀ ಮನೆ ಹೊತ್ತಿಕೊಂಡು ಉರಿದಿದೆ. ಈ ಬಗ್ಗೆ ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!