ಪ್ರಜಾಸ್ತ್ರ ಸುದ್ದಿ
ದೇವರಹಿಪ್ಪರಗಿ: ಆಕಸ್ಮಿಕ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ಭಸ್ಮವಾಗಿರುವ ಘಟನೆ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ನಾಗರಾಳದೋಣಿ ಗ್ರಾಮದಲ್ಲಿ ನಡೆದಿದೆ.
ಬಡೇಸಾಬ್ ಮುಜಾವರ್ ಎಂಬುವರಿಗೆ ಸೇರಿದ ಮನೆ ಸುಟ್ಟು ಕರಕಲವಾಗಿದೆ. ಅಲ್ಲದೇ, ಮಗನ ಮದುವೆಗೆ ಕೂಡಿಟ್ಟ 1.75 ಲಕ್ಷ ನಗದು, 20 ಗ್ರಾಮ ಚಿನ್ನ, ಫ್ರಿಡ್ಜ್ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಹಾನಿಯಾಗಿವೆ. ಇದರಿಂದ ಮನೆ ಮಾಲೀಕ ಬಡೇಸಾಬ್ ದಿಕ್ಕು ತಿಳಿಯದಂತಾಗಿದೆ. ದೇವರಹಿಪ್ಪರಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.