ರಾಜ್ಯದ ಹಿಂದೂಗಳೇ ಉಗ್ರರ ಟಾರ್ಗೆಟ್: ಸಿಎಂ ಬೊಮ್ಮಾಯಿ

148

ಪ್ರಜಾಸ್ತ್ರ ಸುದ್ದಿ

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿ ವಿಲಾಸ ಜಯಲಾಯಶ ಸುಮಾರು 75 ವರ್ಷಗಳ ಬಳಿಕ ತುಂಬಿದ್ದು, ಮುಖ್ಯಮಂತ್ರಿ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿ ಅನೇಕ ಗಣ್ಯರು ಬಾಗಿನ ಅರ್ಪಿಸಿದರು.

ನಂತರ ಮಾತನಾಡಿದ ಸಿಎಂ ಬೊಮ್ಮಾಯಿ, ರಾಜ್ಯದ ಹಿಂದೂಗಳನ್ನು ಉಗ್ರರು ಟಾರ್ಗೆಟ್ ಮಾಡಿದ್ದಾರೆ. ಹೀಗಾಗಿ ಮಂಗಳೂರಿನಲ್ಲಿ ಸಂಭವಿಸಿದ ಕುಕ್ಕರ್ ಸ್ಫೋಟ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದಿದ್ದಾರೆ. ಉಗ್ರರು ಹೊರ ರಾಜ್ಯಗಳ ಸಂಪರ್ಕ ಇಟ್ಟುಕೊಂಡಿದ್ದು ಕರ್ನಾಟಕಕ್ಕೆ ನುಸುಳುತ್ತಿದ್ದಾರೆ.

ಕುಕ್ಕರ್ ಸ್ಫೋಟ ಪ್ರಕರಣದ ಹಿಂದೆ ರಾಷ್ಟ್ರ ಅಥವ ಅಂತಾರಾಷ್ಟ್ರೀಯ ಮಟ್ಟದ ಯಾವುದೇ ಕೈವಾಡವಿದ್ದರೂ ಅದನ್ನು ಭೇದಿಸಲು ಎನ್ಐಎ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ. ಶಾರಿಕ್ ನೊಂದಿಗೆ ಅನೇಕ ಯುವಕರ ನಂಟಿರುವ ಸಾಧ್ಯತೆಯಿದ್ದು, ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದರು.




Leave a Reply

Your email address will not be published. Required fields are marked *

error: Content is protected !!