Search

ಕಿಡಿಗೇಡಿಗಳ ಹುಚ್ಚಾಟಕ್ಕೆ 20 ಜನರಿಗೆ ಗಾಯ

352

ಮುದ್ದೇಬಿಹಾಳ: ವಿಜಯಪುರ ಜಿಲ್ಲೆ ಮುದ್ದೇಬಿಹಾಳದಲ್ಲಿಂದು ಸಂತೆ ನಡೆಯುವ ಟೈಂನಲ್ಲಿ, ಹೆಜ್ಜೇನು ಗೂಡಿಗೆ ಕಿಡಿಗೇಡಿಗಳು ಕಲ್ಲೆಸದ ಪರಿಣಾಮ 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪಟ್ಟಣದ ಸಂತೆ ಬಜಾರನಲ್ಲಿ ಈ ಘಟನೆ ನಡೆದಿದೆ.

ಹೆಜ್ಜೇನು ದಾಳಿಯಿಂದ ಮಕ್ಕಳು, ಮಹಿಳೆಯರು ಗಾಯಗೊಂಡು ಸಹಾಯಕ್ಕೆ ಕಿರುಚಾಟ ನಡೆಸಿದಾಗ ಸ್ಥಳೀಯರು ಸಹಾಯಕ್ಕೆ ಬಂದು, ತಾಲೂಕು ಆಸ್ಪತ್ರೆಗೆ ದಾಖಲಿಸಿದ್ರು. ಈ ವೇಳೆ ಕರ್ತವ್ಯದ ಮೇಲಿದ್ದ ವೈದ್ಯಾಧಿಕಾರಿ ಇಲ್ಲದ ಕಾರಣ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ರು. ವಿಷ್ಯ ತಿಳಿಯುತ್ತಿದ್ದಂತೆ ರಾತ್ರಿ ಡ್ಯೂಟಿ ಮುಗಿಸಿಕೊಂಡು ಹೋಗಿದ್ದ ಡಾ.ಸಂಗಮೇಶ ಆಸ್ಪತ್ರೆಗೆ ಬಂದು ಚಿಕಿತ್ಸೆ ನೀಡಿದ್ದಾರೆ. ಸಧ್ಯಕ್ಕೆ ಗಾಯಾಳುಗಳ ಪರಿಸ್ಥಿತಿ ಸುಧಾರಿಸಿದೆ.

ಓದುಗರ ಗಮನಕ್ಕೆ




Leave a Reply

Your email address will not be published. Required fields are marked *

error: Content is protected !!