ಪ್ರಜಾಸ್ತ್ರ ಸುದ್ದಿ
ಕಲಬುರಗಿ: ತಳವಾರ ಸಮಾಜದ ನಾಯಕ, ಮಾಜಿ ಎಂಎಲ್ಸಿ ದಿವಂಗತ ವಿಠ್ಠಲ ಹೇರೂರ ಅವರ ಕಂಚಿನಮೂರ್ತಿಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಉದ್ಘಾಟಿಸಿದರು. ಗಾಣಗಾಪುರದಲ್ಲಿ ನಡೆದ ಸಮಾರಂಭದಲ್ಲಿ ಮೂರ್ತಿ ಲೋಕಾರ್ಪಣೆಗೊಳಿಸಿದರು.
ಹೇರೂರ ಶಿಕ್ಷಣ ಸಂಸ್ಥೆಯ ರಜತ ಮಹೋತ್ಸವದಲ್ಲಿ ಭಾಗಿಯಾದ ಸಿಎಂ, ಕಂಚಿನಮೂರ್ತಿ ಹಾಗೂ ಧ್ವನಿ ಮುದ್ರಿಕೆಯನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ನೇರ ಮಾತಿನ ಸಮಾಜದ ಪರ ಚಿಂತನೆಯುಳ್ಳ ವಿಠ್ಠಲ ಹೇರೂರ ಹೋರಾಟದಿಂದಲೇ ಬಂದವರು ಎಂದರು. ಇನ್ನು ಕೋಲಿ ಸಮಾಜವನ್ನು ಎಸ್ಟಿ ಸೇರ್ಪಡೆ ಸಂಬಂಧ ಕೇಂದ್ರಕ್ಕೆ ಶಿಫಾರಸು ಮಾಡಲಾಗುತ್ತದೆ ಅಂತಾ ತಿಳಿಸಿದರು.
ಕಾರ್ಯಕ್ರಮದಲ್ಲಿ ಹಾವೇರಿಯ ಅಂಬಿಗರ ಚೌಡಯ್ಯ ಪೀಠದ ಶಾಂತಭೀಷ್ಮ ಸ್ವಾಮೀಜಿ, ಅಲ್ಲಮ ಪ್ರಭು ಪೀಠದ ಮಲ್ಲಣ್ಣಪ್ಪ ಸ್ವಾಮೀಜಿ, ಶಾಸಕರಾದ ಎಂ.ವೈ ಪಾಟಿಲ್, ದತ್ತಾತ್ರೆಯ ಪಾಟೀಲ್ ರೇವೂರು, ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರ್, ಮಾಜಿ ಸಚಿವರಾದ ಪ್ರಮೋದ್ ಮದ್ವರಾಜ್, ಮಾಲಿಕಯ್ಯ ಗುತ್ತೆದಾರ ಸೇರಿ ಇತರರು ಹಾಜರಿದ್ದರು.