ಸಿಂದಗಿ: ಯುವತಿ ನಾಪತ್ತೆ ಪ್ರಕರಣವನ್ನ ದಾಖಲಿಸಿಕೊಳ್ಳುವಲ್ಲಿ ವಿಳಂಬ ಮಾಡಿದ ಕಾರಣಕ್ಕೆ ಕಲಕೇರಿ ಪಿಎಸ್ಐ ವಿನೋದ ಪೂಜಾರಿ ಹಾಗೂ ಎಎಸ್ಐ ಎಸ್.ಬಿ ಆಸಂಗಿ ಅವರನ್ನ ಅಮಾನತು ಮಾಡಲಾಗಿದೆ.
ಇಂದು ಪಟ್ಟಣದ ಸಿಪಿಐ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎಸ್ಪಿ ಪ್ರಕಾಶ ನಿಕ್ಕಂ ಅವರು, ಪಿಎಸ್ಐ ಹಾಗೂ ಎಎಸ್ಐ ಅಮಾನತು ವಿಚಾರ ತಿಳಿಸಿದ್ರು.ಇನ್ನು ಅಸಂತಪುರದ 19 ವರ್ಷದ ಯುವತಿ ರೇಣುಕಾ ಮಾದರ ನಾಪತ್ತೆ ಮತ್ತು ಹತ್ಯೆ ಪ್ರಕರಣ ಸಂಬಂಧ ಹೆತ್ತವರು ನೀಡಿದ ದೂರಿನ ಅನ್ವಯ ಮಡಿವಾಳಪ್ಪ ಬಡಿಗೇರ ಎಂಬಾತನನ್ನ ಇಂದು ಬಂಧಿಸಲಾಗಿದೆ.
ಆಗಸ್ಟ್ 1ರಂದು ಮೋರಟಗಿ ಗ್ರಾಮದ ಬಳಿಯ ಕೆನಾಲ್ ಮೇಲೆ ಅಪರಿಚಿತ ಶವ ಪತ್ತೆಯಾಗಿದೆ. ಪ್ರಕರಣದಲ್ಲಿ ಕಾಣೆಯಾದ ಯುವತಿ ಹಾಗೂ ಸಿಕ್ಕ ಅಪರಿಚಿತ ಶವದ ಮೈಮೇಲಿನ ವಸ್ತುಗಳ ಆಧಾರದ ಮೇಲೆ ತನಿಖೆ ನಡೆದಿದೆ ಎಂದು ತಿಳಿಸಿದ್ರು.