ಇಂಡಿ: ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ತಾಂಬಾದಲ್ಲಿ ನಡೆದಿದೆ. ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 21 ವರ್ಷದ ಗಂಗಾಧರ ನಡಗಡ್ಡಿ ಹಾಗೂ 19 ವರ್ಷದ ರಕ್ಷಿತಾ ಶಿಂಗೆ ಆತ್ಮಹತ್ಯೆ ಮಾಡಿಕೊಂಡ ಜೋಡಿ ಹಕ್ಕಿಗಳು.
ಮೃತ ರಕ್ಷಿತಾ ತಂದೆ ಹನುಮಂತ ಶಿಂಗೆ ಅವರ ಹೊಲದಲ್ಲಿರುವ ಬಾವಿಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2 ತಿಂಗಳ ಹಿಂದೆ ರಕ್ಷತಾಳನ್ನ ಬೇರೊಬ್ಬ ಹುಡ್ಗನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಇದ್ರಿಂದ ಬೇಸತ್ತ ಪ್ರೇಮಿಗಳಿಬ್ಬರು ಎರಡು ದಿನಗಳ ಹಿಂದೆ ಬಾವಿಗೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗ್ತಿದೆ. ಬಾವಿಯಲ್ಲಿ ಕೆಟ್ಟ ವಾಸನೆ ಬಂದ್ಮೇಲೆ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಇಂಡಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದು, ಆತ್ಮಹತ್ಯೆ ಸಂಬಂಧ ಪ್ರಕರಣ ದಾಖಲಾಗಿದೆ.