ಸಮಾಜದ ನಾಯಕರಿಗೆ ಜಾತಿ ಲೇಪ ಹಚ್ಚುವುದು ತಪ್ಪು: ಪ್ರಿಯಾಂಕ್ ಖರ್ಗೆ

96

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಅವರ ಪುತ್ರ, ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ, ಉಪ ಪ್ರಧಾನಿ ಯಾರಾಗಬೇಕು ಎನ್ನುವ ವಿಚಾರ ಬಂದಾಗ ಸಮಾಜದ ನಾಯಕರಿಗೆ ಜಾತಿ ಲೇಪ ಹಚ್ಚುವುದು ತಪ್ಪು. ಆ ಸಮಾಜದವರ ದಕ್ಷತೆ, ಸಮಾರ್ಥ್ಯ ನೋಡುವುದಿಲ್ಲವಾ ಎಂದು ಪ್ರಶ್ನಿಸಿದರು.

ನಮ್ಮ ಮುಂದೆ ಪ್ರಧಾನಿ, ಉಪ ಪ್ರಧಾನಿ ಎನ್ನುವ ಸವಾಲು ಇಲ್ಲ. ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಸಂಸದರನ್ನು ಗೆಲ್ಲಿಸುವುದು. ಕಾಂಗ್ರೆಸ್ ಸ್ವಂತ ಬಲದಿಂದ 200-250 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು.




Leave a Reply

Your email address will not be published. Required fields are marked *

error: Content is protected !!