ಬೆಂಗಳೂರು: ನಗರದ ಸಂಪಿಗೆ ರಸ್ತೆ ಬಳಿಯಿರುವ ಮಂತ್ರಿ ಮಾಲ್ ಗೆ ಇದೀಗ ಮತ್ತೆ ಸಂಕಷ್ಟ ಎದುರಾಗಿದೆ. ಕಳೆದ ಕೆಲ ದಿನಗಳ ಹಿಂದೆ ಸೋರಿಕೆ ಕಂಡು ಬಂದಿತ್ತು. ಇದಕ್ಕೂ ಕೆಲ ತಿಂಗಳುಗಳ ಹಿಂದೆ ಕಟ್ಟಡದಲ್ಲಿ ಬಿರುಕು ಕಂಡು ಬಂದು ಒಂದಿಷ್ಟು ದಿನ ಬಂದ್ ಮಾಡಲಾಗಿತ್ತು. ಇದೀಗ ಮತ್ತೆ ಸಂಕಷ್ಟ ಎದುರಾಗಿದೆ.
ಅಕ್ರಮ ಭೂ ಒತ್ತುವರಿ ಹಿನ್ನೆಲೆಯಲ್ಲಿ ಮಂತ್ರಿ ಮಾಲ್ ವಶಕ್ಕೆ ಪಡೆಯುವಂತೆ ಸಕ್ಷಮ ಪ್ರಾಧಿಕಾರಿ ಕೋರ್ಟ್ ಆದೇಶ ನೀಡಿದೆ. 4.29 ಎಕರೆ ಪ್ರದೇಶದ ಸುಮಾರು 400 ಕೋಟಿ ಬೆಲೆ ಬಾಳುವ ಭೂಮಿಯನ್ನ ಒತ್ತುವರಿ ಮಾಡಿಕೊಳ್ಳಲಾಗಿದೆ ಅನ್ನೋದು ತಿಳಿದು ಬಂದಿದೆ. ಇದರ ತನಿಖೆ ನಡೆಸಿದ ಸಕ್ಷಮ ಪ್ರಾಧಿಕಾರಿ ಕೋರ್ಟ್ ಒತ್ತುವರಿ ಆರೋಪ ಸಾಬೀತಾಗಿದೆ. ಹೀಗಾಗಿ ಮಾಲ್ ವಶಕ್ಕೆ ಪಡೆಯಿರಿ ಎಂದು ಪ್ರಾದೇಶಿಕ ಆಯುಕ್ತರಿಗೆ ಆದೇಶ ನೀಡಿದೆ. ಹೀಗಾಗಿ ಪ್ರತಿಷ್ಠಿತ ಮಾಲ್ ಗೆ ಸಂಕಷ್ಟ ಎದುರಾಗಿದೆ.