ಬೆಂಗಳೂರು: ಬಿಎಸ್ಪಿ ಉಚ್ಛಾಟಿತ ಶಾಸಕ ಎನ್.ಮಹೇಶ ಇದೀಗ ಬಿ.ಎಸ್ ಯಡಿಯೂರಪ್ಪ ಸರ್ಕಾರಕ್ಕೆ ಬೆಂಬಲ ಘೋಷಿಸಿದ್ದಾರೆ. ಸಿಎಂ ಬಿಎಸ್ವೈ ಅವರು ನಮ್ಮ ಸರ್ಕಾರಕ್ಕೆ ಬೆಂಬಲ ನೀಡುವಂತೆ ಕೇಳಿಕೊಂಡಿದ್ರು. ಇದೀಗ ನಾನು ಸ್ವತಂತ್ರ ಶಾಸಕ. ಹೀಗಾಗಿ ಬೆಂಬಲ ಘೋಷಿಸಿದ್ದೇನೆ ಅಂತಾ ಹೇಳಿದ್ದಾರೆ.
ಮೊದಲ ಬಾರಿಗೆ ಶಾಸಕರಾದ ಎನ್.ಮಹೇಶ ದೋಸ್ತಿ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ರು. ಆದ್ರೆ, ದಿಢೀರ್ ರಾಜೀನಾಮೆ ನೀಡಿದ್ರು. ಇದು ಬಿಎಸ್ಪಿ ನಾಯಕಿ ಮಾಯಾವತಿಗೂ ಶಾಕ್ ಆಗಿತ್ತು. ಮುಂದೆ ಮೈತ್ರಿ ಪಕ್ಷಕ್ಕೆ ಬೆಂಬಲ ಸೂಚಿಸಲು ಹೇಳಿದಾಗ್ಲೂ ಅವರ ಮಾತಿಗೆ ಡೋಂಟ್ ಕೇರ್ ಅಂದಿದ್ರು. ಹೀಗಾಗಿ ಎನ್.ಮಹೇಶರನ್ನ ಬಿಎಸ್ಪಿಯಿಂದ ಉಚ್ಚಾಟಿಸಲಾಯ್ತು. ಇದೀಗ ಅವರು ಸಿಎಂ ಬಿಎಸ್ವೈ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಬೆಂಬಲ ಘೋಷಣೆ ಮಾಡಿದ್ದಾರೆ.