ಮೈಸೂರು: ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ, ಮಾಜಿ ಸಿಎಂ ಸಿದ್ದರಾಮಯ್ಯನವರ ಮುಂದೆ ಬೇಸರವನ್ನ ವ್ಯಕ್ತಪಡಿಸಿದ್ದಾರೆ. ನಗರದ ರಾಮಕೃಷ್ಣ ನಗರದಲ್ಲಿರುವ ಅವರ ನಿವಾಸಕ್ಕೆ ಭೇಟಿ ನೀಡಿದ ಟೆನ್ನಿಸ್ ಕೃಷ್ಣ, ಸ್ಯಾಂಡಲ್ ವುಡ್ ಗುಂಪುಗಾರಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಮೊದಲು ಪ್ರತ್ಯೇಕ ಗುಂಪೊಂದು ಇತ್ತು. ಈ ಬಗ್ಗೆ ನಾನು ಧೈರ್ಯವಾಗಿಯೇ ಈ ಹಿಂದೆ ಹೇಳಿದ್ದೆ. ಇದೀಗ ಅದು ಒಡೆದು ಹೋಗಿದೆ. ಹೀಗಾಗಿ ಕೆಲವರು ನಮ್ಗೆ ಅವಕಾಶ ಮಾಡಿ ಕೊಡ್ತಿಲ್ಲ. ಅಭಿಮಾನಿಗಳು ನಮ್ಮ ನಟನೆಗಾಗಿ ಕಾಯುತ್ತಿದ್ದಾರೆ. ಆದ್ರೆ, ಕೆಲವರು ಅವಕಾಶ ಸಿಗದಂತೆ ನೋಡಿಕೊಳ್ತಿದ್ದಾರೆ ಎಂದು ಹಿರಿಯ ಕಲಾವಿದ ಟೆನ್ನಿಸ್ ಕೃಷ್ಣ ನೋವು ಹಂಚಿಕೊಂಡಿದ್ದಾರೆ.
600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಹಿರಿಯ ಕಲಾವಿದ ಟೆನ್ನಿಸ್ ಕೃಷ್ಣ. ಹಾಸ್ಯನಟಿ ರೇಖಾದಾಸ ಜೊತೆ ಬರೋಬ್ಬರಿ 100 ಚಿತ್ರಗಳಲ್ಲಿ ನಟಿಸಿ ರೆಕಾರ್ಡ್ ಮಾಡಿದವರು. ಇಂಥಾ ನಟ ಇದೀಗ ಅವಕಾಶ ಸಿಗ್ತಿಲ್ಲವೆಂದು ಹೇಳ್ತಿರುವುದು ನಿಜಕ್ಕೂ ನೋವಿನ ಸಂಗತಿಯಾಗಿದೆ.